ಈ ಐದು ದೇವರನ್ನು ಪೂಜೆ ಮಾಡಿದರೆ ನೀವು ಮುಟ್ಟಿದ್ದೆಲ್ಲಾ ಚಿನ್ನ ಆಗಲಿದೆ! ಆ ಐದು ದೇವರು ಯಾರು ಗೊತ್ತಾ?

ಈ ಐದು ದೇವರನ್ನು ಪೂಜೆ ಮಾಡಿದರೆ ನೀವು ಮುಟ್ಟಿದ್ದೆಲ್ಲಾ ಚಿನ್ನ ಆಗಲಿದೆ! ಆ ಐದು ದೇವರು ಯಾರು ಗೊತ್ತಾ?

ನಿಮ್ಮ ಮನೆಯಲ್ಲಿ ಈ ಐದು ದೇವರ ಮೂರ್ತಿ ಚಿತ್ರವನ್ನು ಪೂಜಿಸಿದರೆ ನಿಮ್ಮ ಮನೆಗೆ ಸಾಕ್ಷಾತ್ ಮಹಾಲಕ್ಷ್ಮಿಯು ಮನೆಗೆ ಪ್ರವೇಶ ಮಾಡುತ್ತಾಳೆ. ಎಷ್ಟೋ ಜನರಿಗೆ ಅನಿಸಿರಬಹುದು ನಾವು ಎಷ್ಟೇ ಕೆಲಸ ಮಾಡಿದರು ಮನೆಯಲ್ಲಿ ನೆಮ್ಮದಿ ಅನ್ನೋದು ಸಿಗುತ್ತಿಲ್ಲ ಎಷ್ಟೇ ಸಂಪಾದನೆ ಮಾಡಿದರು ಸಾಕಾಗುತ್ತಿಲ್ಲ ಮತ್ತು ಹಣವನ್ನು ಉಳಿಸುವ ನಿಮ್ಮ ಯೋಜನೆ ವಿಫಲವಾಗುತ್ತಿದೆ ಎಂದು. ಯಾರು ದೇವರು ಅನುಗ್ರಹ ಬಯಸುತ್ತಿರುವಿರೋ ಮತ್ತು ತಮ್ಮ ಕಷ್ಟ ಕಾರ್ಪಣ್ಯಗಳಿಗೆ ಮುಕ್ತಿಯನ್ನು ಬಯಸುತ್ತಿರುವಿರೋ ಅಂಥವರು ಈ ತರಹದ ಐದು ದೇವರು ಮೂರ್ತಿ ಚಿತ್ರವನ್ನು ತಮ್ಮ ಮನೆಗೆ ತಂದು ದಿನನಿತ್ಯ ಪೂಜಿಸಿ.

ಮೂರ್ತಿ ಚಿತ್ರಗಳನ್ನು ತಂದು ಇಟ್ಟ ನಂತರ ಯಾವ ರೀತಿ ಪೂಜೆ ಸಲ್ಲಿಸಬೇಕು ಎಂಬ ಯೋಜನೆ ನಿಮ್ಮೆಲ್ಲರಿಗೂ ಕಾಡುತ್ತಿದೆ ಎಂಬುದು ನಮಗೆ ತಿಳಿದಿದೆ ಹಾಗಾದರೆ ಬನ್ನಿ ಪೂರ್ತಿ ಚಿತ್ರವನ್ನು ತಂದ ನಂತರ ಪೂಜಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಇದನ್ನು ತಿಳಿದುಕೊಳ್ಳುವ ಮೊದಲು ನೀವು ತಿಳಿದುಕೊಳ್ಳಬೇಕಾದಿರುವ ಒಂದು ವಿಷಯ ಹೇಳಲು ಇಚ್ಚಿಸುತ್ತೇವೆ, ಪೂಜೆ ಮಾಡುವ ಮೊದಲು ಮುಖ್ಯವಾಗಿ ಬೇಕಾಗಿರುವ ಅಂಶವೇನೆಂದರೆ ನಿಮ್ಮೊಳಗೆ ಇರುವ ಭಕ್ತಿ ಅದನ್ನು ಮೊದಲು ಜಾಗೃತಗೊಳಿಸಬೇಕು ಹೀಗೆ ಮಾಡಿದರೆ ಮಾತ್ರ ನೀವು ಮಾಡುವ ವಿಧಾನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.

ಮೊದಲನೇದಾಗಿ ಯಾವ ದೇವರನ್ನು ಪೂಜೆ ಮಾಡಬೇಕೆಂದರೆ ಅದುವೇ ಶ್ರೀರಾಮ. ಶ್ರೀರಾಮ ಪಟ್ಟಾಭಿಷೇಕ ಆಗುವ ಚಿತ್ರಗಳನ್ನು ತಂದು ಪೂಜಿಸಬೇಕು ಅಂತ ಮನೆ ಒಳಗೆ ಶ್ರೀ ರಾಮನ ಅನುಗ್ರಹವನ್ನು ಖಚಿತವಾಗಿ ಸಿಗುತ್ತದೆ ಮತ್ತು ಕಂಡ ನೆಮ್ಮದಿಯನ್ನು ಕಾಣುವಿರಿ ಏಕೆಂದರೆ ಜೀವನದ ಉದ್ದಕ್ಕೂ ನೋವುಗಳನ್ನು ಪೂಜಿಸಿದರೆ ಪರಿಸ್ಥಿತಿಯನ್ನು ಸುಲಭವಾಗಿ ಎದುರಿಸಬಹುದು.  

ಎರಡನೆಯದಾಗಿ ಶಿವ ಶಕ್ತಿ ಸ್ವರೂಪವಾದ ಅರ್ಧನಾರೀಶ್ವರ ಚಿತ್ರವನ್ನು ಪೂಜಿಸಬೇಕು. ಮುಖ್ಯವಾಗಿ ಯಾವ ಮನೆಯಲ್ಲಿ ಗಂಡ ಹೆಂಡತಿ ಮಧ್ಯ ಹೆಚ್ಚು ಸಮಸ್ಯೆ ಇರುವುದು ಮತ್ತು ಸಂಬಂಧಗಳಲ್ಲಿ ಬಿರುಕು ಮೂಡುವುದು ಅಂತ ಮನೆಯಲ್ಲಿ ಅರ್ಧನಾರೀಶ್ವರ ರನ್ನು ಪೂಜಿಸುವುದು ತುಂಬಾ ಯೋಗ್ಯವಾದ ವಿಷಯ ಏಕೆಂದರೆ ಅರ್ಧನಾರೀಶ್ವರ ಚಿತ್ರದ ಸಂಕೇತನೇ ಹೊಂದಿಕೊಂಡು ಹೋಗುವುದು ಸಹಬಾಳ್ವೆ ನಡೆಸುವುದು ಇದನ್ನು ದಿನನಿತ್ಯ ಪೂಜೆ ಮಾಡುವುದರಿಂದ ನಮ್ಮ ಮನದಲ್ಲೂ ಆ ಭಾವನೆ ಮೂಡುವುದಂತೂ ಖಚಿತ.

ಮೂರನೆಯದಾಗಿ ಪಂಚಮುಖಿ ಹನುಮಂತ ಯಾರಿಗೆ ನರದೋಷ ಮತ್ತು ನಕರಾತ್ಮಕ ಶಕ್ತಿಗಳಿಂದ ತೊಂದರೆಯಾಗುತ್ತಿದೆಯೋ ಅಂತವರು ತಕ್ಷಣವೇ ಪಂಚಮುಖಿ ಹನುಮಂತನ ಚಿತ್ರವನ್ನು ತಂದು ಪೂಜೆ ಮಾಡುವುದು ತುಂಬಾ ಯೋಗ್ಯ ಏಕೆಂದರೆ ಪಂಚಮುಖಿ ಹನುಮಂತನ ಪೂಜೆ ಮಾಡುವ ಮೂಲ ಉದ್ದೇಶವೇ ನಕಾರಾತ್ಮಕ ಶಕ್ತಿಗಳನ್ನು ತಡೆಯುವುದು ಮತ್ತು ನಾಶ ಮಾಡುವುದು. ( video credit :Degula darshana Karnataka )

ಇನ್ನು ನಾಲ್ಕನೆಯದಾಗಿ ಲಕ್ಷ್ಮೀನಾರಾಯಣ, ಯಾವ ಮನೆಯಲ್ಲಿ ಎಲ್ಲವೂ ಚೆನ್ನಾಗಿ ಇರುವಂತೆ ಕಾಣುತ್ತದೆ ಆದರೆ ಒಳಗೊಳಗೆ ಹೇಳಿಕೊಳ್ಳಲಾಗದ ಸಮಸ್ಯೆ ಅದು ಹಣದ ವಿಚಾರ ಕೌಟುಂಬಿಕ ವಿಚಾರ ಮತ್ತು ಇತರೆ ವಿಚಾರಗಳಾಗಿಯೂ ಹೊರಗೆ ಯಾರಿಗೂ ಹೇಳಲಾಗದ ಸಮಸ್ಯೆಯನ್ನು ಇದ್ದರೆ ಅಂತವರು ಲಕ್ಷ್ಮೀನಾರಾಯಣ ಚಿತ್ರವನ್ನು ತಂದು ಪೂಜಿಸಬೇಕು. ಏಕೆಂದರೆ ಅನಾದಿಕಾಲದಿಂದಲೂ ಮನೆಯ ಸಮಸ್ಯೆಗೆ ಮತ್ತು ಶಾಪವಿಮೋಚನೆಗೆ ಪೂಜಿಸಿಕೊಂಡು ಬಂದಿರುವ ದೈವವೆಂದರೆ ಅದು ಲಕ್ಷ್ಮೀನಾರಾಯಣ.

ಕೊನೆಯದಾಗಿ ಐದನೆಯ ಮೂರ್ತಿ ಚಿತ್ರ ಯಾವುದು ಎಂದರೆ ಅದುವೇ ಶಾಂತ ಸ್ವರೂಪವಾಗಿ ಕಾಣುವ ಲಕ್ಷ್ಮಿ ನರಸಿಂಹರ ಮೂರ್ತಿ ಚಿತ್ರ ಇದನ್ನು ಪೂಜಿಸಿದರೆ ಖಂಡಿತ ಆರೋಗ್ಯ ಸಮಸ್ಯೆ ಯಾವುದೇ ಕಾರಣಕ್ಕೂ ಬರುವುದಿಲ್ಲ ಅದರಲ್ಲೂ ಮುಸ್ಸಂಜೆ ಹೊತ್ತು ಅಥವಾ ಸಾಯಂಕಾಲ ಸೂರ್ಯ ಮುಳುಗಿದ ನಂತರ ಅಥವಾ ಸೂರ್ಯ ಮುಳುಗುವ ಒಂದು ಸ್ವಲ್ಪ ಹೊತ್ತು ಮುಂಚೆ ಮನೆಯ ಮುಂಭಾಗಳಿಗೆ ಸಾಮ್ರಾಣಿ ಭಕ್ತಿಯನ್ನು ಹಚ್ಚಿ ಭಕ್ತಿಯಿಂದ ಪೂಜಿಸಿದರೆ ಶತ್ರುಗಳ ನಾಶ ಮತ್ತು ಪಿ ಡಿ ಪಿಶಾಚಿಯಿಂದ ವಿಮೋಚನೆಯನ್ನು ಪಡೆಯುವಿರಿ.