ತಮ್ಮ ಹೆಂಡತಿ ಹಾಗೂ ಮಗನ ಇಷ್ಟು ವರ್ಷ ದೂರ ಇಡಲು ಕಾರಣ ಹೊರ ಹಾಕಿದ ವಿನೋದ್ ರಾಜ್..!

ತಮ್ಮ ಹೆಂಡತಿ ಹಾಗೂ ಮಗನ ಇಷ್ಟು ವರ್ಷ ದೂರ ಇಡಲು ಕಾರಣ ಹೊರ ಹಾಕಿದ ವಿನೋದ್ ರಾಜ್..!

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ದಕ್ಷಿಣ ಭಾರತದ ಖ್ಯಾತ ನಟಿ ಲೀಲಾವತಿ ಅಮ್ಮನವರು ಇತ್ತೀಚಿಗಷ್ಟೇ ವಿಧಿವಶರಾದರು.. ಲೀಲಾವತಿ ಅವರ ಅಗಲಿಕೆಯಲ್ಲಿ ಮಗ ವಿನೋದ್ ರಾಜ್ ಅವರ ಇಡಿ ಕುಟುಂಬ ಇನ್ನೂ ಕೂಡ ನೋವಿನಲ್ಲಿದೆ..ಹಾಗಿದ್ದರೂ ಕೂಡ ಇತ್ತೀಚಿಗೆ ನಟ ವಿನೋದ್ ರಾಜ್ ಅವರು ಮಾಧ್ಯಮದ ಮೂಲಕ ಕಾಣಿಸಿಕೊಂಡು ಅಮ್ಮನ ಬಗ್ಗೆ ಕೆಲವು ವಿಚಾರಗಳ ಹೇಳಿಕೊಂಡಿದ್ದಾರೆ. ಲೀಲಾವತಿ ಅಮ್ಮನವರ ಅಗಲಿಕೆ ಆಗುತ್ತಿದ್ದಂತೆ ಅವರ ವೈಯಕ್ತಿಕ ವಿಚಾರಗಳು ಮತ್ತು ವಿನೋದ್ ರಾಜ್ ರ ಕೆಲವು ವಿಚಾರಗಳು ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಹೌದು ಇಷ್ಟು ದಿವಸ ನಟ ವಿನೋದ್ ರಾಜ್ ಅವರು ಅವರ ಪತ್ನಿ ಮತ್ತು ಮಗನನ್ನು ಯಾಕೆ ತಮ್ಮಿಂದ ಮತ್ತು ತಮ್ಮ ತಾಯಿಯಿಂದ ದೂರ ಇಟ್ಟಿದ್ದರು ಎನ್ನುವ  ವಿಚಾರವನ್ನ ನಾವು ಈ ಲೇಖನದ ಮೂಲಕ ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಗೆಳೆಯರೇ. ಹೌದು ಅವರೇ ಹೇಳಿದ ಹಾಗೆ ನನ್ನ ತಾಯಿಗೆ ವಿಶೇಷವಾದ ದೇವಸ್ಥಾನಗಳನ್ನು ನೋಡುವ ಆಸೆ ಇತ್ತು. ಆದರೆ ಅದು ನೆರವೇರಲಿಲ್ಲ..ಹಾಗಾಗಿ ಅವರ ಸ್ಮಾರಕ ಕಟ್ಟಬೇಕು ಅವರಿಗೊಂದು ಅವರ ನೆನಪಿನಲ್ಲಿ ಗುಡಿ ಕಟ್ಟಬೇಕು, ಅದರ ಸಮಯ ಬರುತ್ತದೆ ಎಂದು ನಟ ವಿನೋದ್ರಾಜ್ ಹೇಳಿದರು.

ನಂತರ ತಮ್ಮ ಮಡದಿ ಮತ್ತು ಮಗನನ್ನು ಯಾಕೆ ಇಷ್ಟು ದಿವಸ ದೂರ ಇಟ್ಟಿದ್ದರು ಎಂಬ ವಿಚಾರವನ್ನು ಸಹ ಈಗ ಹೇಳಿಕೊಂಡಿದ್ದು, ನನ್ನ ತಾಯಿ ನನ್ನನ್ನು ಹೇಗೆ ತಿದ್ದಿ ತೀಡಿ ಬೆಳೆಸಿದರೋ ಅದರಂತೆ ನನ್ನ ಪತ್ನಿ ನನ್ನ ಮಗನನ್ನು ಬೆಳೆಸಿದ್ದಾಳೆ..ಅವರು ಇಲ್ಲಿದ್ದರೆ ಪತ್ನಿ ಮಗನ ಬಗ್ಗೆ ಕೆಲವೊಂದಿಷ್ಟು ವಿಚಾರಗಳ ಕುರಿತು ಮಾತುಗಳು ಹೆಚ್ಚು ಬರಬಹುದು ಎಂದು ನನ್ನ ತಾಯಿಯೇ ಅವರಿಬ್ಬರನ್ನು ಮದ್ರಾಸ್ ನಲ್ಲಿ ಇರುವಂತೆ ಹೇಳಿದರು. ಹಾಗೆ ಮಗನು ಚೆನ್ನಾಗಿ ಓದಲಿ ಎನ್ನುವ ಉದ್ದೇಶದಿಂದ ಅಲ್ಲಿಯೇ ಇರಲು ಹೇಳಿದ್ದೇವು.. ಅದರಂತೆ ನನ್ನ ಮಗ ಇಂದು ಒಳ್ಳೆಯ ವಿದ್ಯಾಭ್ಯಾಸ ಮಾಡಿ ದೊಡ್ಡ ಹುದ್ದೆಯಲ್ಲಿ ಇದ್ದಾನೆ. ತಿಂಗಳಿಗೆ 50,000 ಸಂಬಳ ಅವನಿಗಿದೆ.  ಅದೊಂದು ಕಾರಣಕ್ಕೆ ಅವರಿಬ್ಬರನ್ನು ನಮ್ಮಿಂದ ದೂರ ಇಷ್ಟು ದಿವಸ ಇಡಲಾಗಿತ್ತು ಎನ್ನುವ ವಿಚಾರವನ್ನು ನಟ ವಿನೋದ್ ರಾಜ್ ಅವರೆ ಸ್ವತಹ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.. ಜೊತೆಗೆ ಅತ್ತ ಚೆನ್ನೈನಲ್ಲಿದ್ದರೂ ಕನ್ನಡವನ್ನು ತುಂಬಾನೇ ಚೆನ್ನಾಗಿ ಮಾತನಾಡುತ್ತಾನೆ ನನ್ನ ಮಗ ಎಂದು ನಟ ವಿನೋದ್ ರಾಜ್ ಅವರು ಹಾಡಿ ಹೊಗಳಿದರು..ಈ ಕುರಿತು ನಿಮ್ಮ ಅನಿಸಿಕೆ ಹೇಳಿ ಧನ್ಯವಾದಗಳು.