ಡಬಲ್ ಎಲಿಮಿನೇಷನ್ ಭೀತಿಯಲ್ಲಿ ಬಿಗ್ ಬಾಸ್ ಮನೆ! ಗೇಟ್ ಪಾಸ್ ಪಡೆಯುವ ಸ್ಪರ್ಧಿಗಳು ಯಾರು ಗೊತ್ತಾ?

ಡಬಲ್ ಎಲಿಮಿನೇಷನ್ ಭೀತಿಯಲ್ಲಿ ಬಿಗ್ ಬಾಸ್ ಮನೆ! ಗೇಟ್ ಪಾಸ್ ಪಡೆಯುವ ಸ್ಪರ್ಧಿಗಳು ಯಾರು ಗೊತ್ತಾ?

ನಮ್ಮ ಕಿರುತೆರೆಯ ಹಬ್ಬ ಎಂದೇ ಪ್ರಕ್ಯಾತಿ ಪಡೆದಿರುವ "ಬಿಗ್ ಬಾಸ್ ಸೀಸನ್ ಹತ್ತು" ಶುರುವಾಗಿ ಮೂರು ವಾರಗಳ ಕೊಡ ಕಳೆದಿದೆ. ಇನ್ನೂ ಇಂದು ನಾಲ್ಕನೇ ವಾರದ ಪಂಚಾಯತಿಗೆ ಎಲ್ಲವು ಸಿದ್ದ ಗೊಂಡಿದೆ. ಇನ್ನೂ ಈ ವಾರ ಕೊಂಚ ಬಿಸಿ ಹೆಚ್ಚಾಗಿಯೇ ಇದೆ ಎಂದ್ರೆ ತಪ್ಪಾಗಲಾರದು. ಏಕೆಂದ್ರೆ ಕಳೆದ ವಾರವಷ್ಟೇ ನಮ್ಮ ಕನ್ನಡ ಬಿಗ್ ಬಾಸ್ ಶೋ ನ ಸಾರಥಿ ಆಗಿರುವ "ಕಿಚ್ಚ ಸುದೀಪ್ "ಅವರು ಬಂದು  ಎಲ್ಲರಿಗೂ ಕೊಡ ಎಚ್ಚರಿಕೆಯ ಘಂಟೆ ಬಾರಿಸಿದ್ದಾರೆ. ಹೀಗಿದ್ದರು ಕೊಡ ಈ ಮನೆಯ ಸ್ಪರ್ಧಿಗಳ ವರ್ತನೆ ಮಿತಿ ಮೀರುತ್ತಿದೆ ಎಂದು ಸಾಮಾಜಿಕ ಜಾಲತಣಗಳಲ್ಲಿ ಹೆಚ್ಚಿನ ವಿರೋಧ ಪ್ರೇಕ್ಷಕರಿಂದ ಅಲ್ಲದೆ ಸೆಲಬ್ರೆಟಿಗಳಿಂದ ಕೊಡ ಶುರುವಾಗಿದೆ. ಹೀಗಿರುವಾಗ ಈ ಬೀಸಿಯನ್ನು ಕಿಚ್ಚ ಇಂದಿನ ಪಂಚಾಯತಿಯಲ್ಲಿ ಹೇಗೆ ತಲುಪಿಸಲಿದ್ದಾರೆ ಎಂದು ನಾವು ಕಾದು ನೋಡಬೇಕಿದೆ.

ಇದಲ್ಲದೆ ಮನೆ ಎಷ್ಟೆಲ್ಲ ತಲೆ ನೋವಿನ ಜೊತೆಗೆ ಮತ್ತೊಂದು ತಲೆ ನೋವಿಗೆ ತಯಾರಾಗಬೇಕು. ಅದೇನೆಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. ಇನ್ನೂ ಮೂರು ವಾರಗಳನ್ನು ಪೂರೈಸಿರುವ ಈ ರಿಯಾಲಿಟಿ ಶೋ ಎರಡು ಸ್ಪರ್ಧಿಗಳನ್ನು ಮನೆಯಿಂದ ಹೊರ ಹಾಕಿದೆ. ಅತಿ ಕಡಿಮೆ ವೋಟ್ ಪಡೆದುಕೊಂಡ ಸ್ನೇಕ್ "ಶ್ಯಾಮ್ ಹಾಗೂ ಗೌರೀಶ್" ಅವರು ಮನೆಯಿಂದ ಹೋರ ಬಂದರು. ಆದ್ರೆ ಮೂರನೇ ವಾರದಲ್ಲಿ ದಸರಾ ಹಬ್ಬದ ಪ್ರಯುಕ್ತ "ಭಾಗ್ಯಶ್ರೀ" ಅವರು ಎಲಿಮಿನೇಟ್ ಆಗಿದ್ದರು ಕೊಡ ಅವರಿಗೆ ಒಂದು ಅವಕಾಶವನ್ನು ನೀಡಲಾಗಿತ್ತು. ಇದೀಗ ಮನೆ ಡಬಲ್ ಎಲಿಮಿನೇಷನ್ ಆಗುವ ಭೀತಿಯಲ್ಲಿ ಇದೆ.

ಕಾರಣ ಏನೆಂದರೆ ಮೂರನೇ ವಾರ ಮನೆಗೆ ಹೋಗುವ ಸ್ಪರ್ಧಿ ಮನೆಗೆ ಹೋಗದೆ ಅಲ್ಲಿಯೇ ಉಳಿದಿದ್ದು ಇನ್ನೂ ಹುಲಿ ಉಗುರನ್ನು ಧರಿಸುವುದರಿಂದ "ವರ್ತೂರು ಸಂತೋಷ್" ಅವರನ್ನು ಮನೆಯಿಂದಲೇ ಪೊಲೀಸ್ ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು. ಈಗ ಆ ಸಮಸ್ಯೆ ಬಗೆ ಹಾರಿಸಿಕೊಂಡು ವರ್ತೂರು ಅವರು ಜಾಮೀನು ಪಡೆದುಕೊಂಡು ಮತ್ತೆ ಮನೆಗೆ ರಿ ಎಂಟ್ರಿ ಪಡೆದುಕೊಂಡಿದ್ದಾರೆ. ಹೀಗಿರುವಾಗ ಮನೆಯ ಸದಸ್ಯರ ಸಂಖ್ಯೆ ಹೆಚ್ಚಿರುವ ಕಾರಣ ಈ ವಾರ ಡಬ್ಬಲ್ ಎಲಿಮಿನೇಷ್ ಇದೆ ಎನ್ನುವ ಎಲ್ಲಾ ಸೋಚನೆಗಳನ್ನ ಬಿಗ್ ಬಾಸ್ ಮನೆ ನೀಡಿದೆ. ಇನ್ನೂ ಈ ವಾರಕ್ಕೆ ಬರೋಬ್ಬರಿ ಎಂಟು ಮಂದಿ ನಾಮಿನೇಟ್ ಆಗಿದ್ದಾರೆ. ಈ ಎಂಟು ಮಂದಿಯ ಪೈಕಿ ಯಾರು ಮನೆಯಿಂದ ಹೋರ ಬರಲಿದ್ದಾರೆ ಎಂದು ನಾವು ಕಾದು ನೋಡಬೇಕಿದೆ.