ಸ್ಪಂದನ ಅವರ ಅಗಲಿಕೆಯ ನಂತರ ರಾಘು ತಮ್ಮ ಮಗನ ಬಗ್ಗೆ ತೆಗೆದುಕೊಂಡ ನಿರ್ಧಾರ ಏನು ಗೊತ್ತಾ?

ಸ್ಪಂದನ ಅವರ ಅಗಲಿಕೆಯ ನಂತರ ರಾಘು ತಮ್ಮ ಮಗನ ಬಗ್ಗೆ ತೆಗೆದುಕೊಂಡ ನಿರ್ಧಾರ ಏನು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಕಲಾವಿದರ ಅಕಾಲಿಕ  ಮರಣದ ಕಪ್ಪು ಛಾಯೆ ಇಂದಿಗೂ ಕಡಿಮೆಯಾಗಿಲ್ಲ. ಇನ್ನೂ ನಾವು ನಾಲ್ಕು ವರ್ಷಗಳ ಹಿಂದೆ ನಡೆದ "ಚಿರು" ಅವರ ಅಕಾಲಿಕ ಮರಣದ ಘಟನೆಯಿಂದ ಹೊರಗೆ ಬಂದಿಲ್ಲ. ಆ ನಡುವೆ "ಸಂಚಾರಿ ವಿಜಯ್" ಹಾಗೂ ನಮ್ಮ ಪ್ರೀತಿಯ "ಅಪ್ಪು" ಅವರು ಕೂಡ ನಮ್ಮನ್ನು ಅಗಲಿದ್ದಾರೆ. ಇದೀಗ ಕಳೆದ ತಿಂಗಳು ಕೂಡ ಯಾರ ಊಹೆಗೂ ಕೂಡ ಸಿಲುಕದ ಜೀವವೊಂದು ನಮನ್ನು ಅಗಲಿದ್ದಾರೆ. ಆ ಜೀವ ಮತ್ತೊಂದು ಜೀವಕ್ಕೇ ಬಹಳ ಮುಖ್ಯವಾಗಿದ್ದು ಎಂದ್ರೆ ತಪ್ಪಾಗಲಾರದು. ಎಷ್ಟೆಲ್ಲ ಹೇಳಿದ ಕೂಡಲೇ ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಿಮಗೆ ಈಗಾಗಲೇ ತಿಳಿದಿರುತ್ತದೆ. ಆ ಅಮೂಲ್ಯವಾದ ಜೀವ ಬೇರಾರದ್ದು ಅಲ್ಲ ನಮ್ಮ ಸ್ಯಾಂಡಲ್ ವುಡ್ ನ "ಚಿನ್ನಾರಿ ಮುತ್ತನ ಚಿನ್ನ".

ಸ್ಯಾಂಡಲ್ ವುಡ್ ನಲ್ಲಿ "ವಿಜಯ್ ರಾಘವೇಂದ್ರ" ಅವರಿಗೆ ನಟನಾಗಿ ಒಂದು ಉತ್ತಮ ಸ್ಥಾನ ದೊರಕದೆ ಇದ್ದರು ಕೂಡ ಅವರಿಗೆ ನಮ್ಮ ಸ್ಯಾಂಡಲ್ ವುಡ್ ಹಾಗೂ ಅಭಿಮಾನಿಗಳ ಮನಸ್ಸಿನಲ್ಲಿ ಒಬ್ಬ ಅದ್ಬುತ ಜೀವ ಎನ್ನುವ ಸ್ಥಾನ ಹಾಗೂ ಬಿರುದು ಸಿಕ್ಕಿದೆ. ಏಕೆಂದ್ರೆ ಅವರಲ್ಲಿ ಕಿಂಚಿತ್ತೂ ಕಲ್ಮಶ ಹಾಗೂ ಸ್ವಾರ್ಥ ಮನೋಭಾವ ಎಲ್ಲದ ಒಂದು ಅದ್ಬುತ ಮನಸ್ಸನ್ನು ಈತ ಹೊಂದಿದ್ದಾರೆ. ಇನ್ನೂ ಅವರ ಪತ್ನಿ ಕೂಡ ಅವರಷ್ಟೇ ಸಾಧುಮನಸ್ವಿ. ಇನ್ನೂ ವಿಜಯ್ ಅವರು ಯಾವುದೇ ವೇದಿಕೆ ಏರಿದರು ಕೂಡ ತಮ್ಮ ಬೆನ್ನೆಲುಬಾಗಿ ನಿಲ್ಲುವ ಸ್ಪಂದನ ಅವರ ಬಗ್ಗೆ ಮಾತನಾಡದೆ ಕೆಳಗೆ ಇಳಿಯುವುದಿಲ್ಲ. ಇನ್ನೂ ಹೇಳುವುದಾದರೆ ವಿಜಯ್ ಅವರ ದಿನ ನಿತ್ಯದ ಕ್ರಮದಲ್ಲಿ "ಸ್ಪಂದನ" ಅವರು ಮುಕ್ಕಾಳಷ್ಟು ಅವಲಂಬಿತರಾಗಿದ್ದವರು ಎಂದ್ರೆ ತಪ್ಪಾಗಲಾರದು. 

( video credit : cini buzz)

ಇನ್ನೂ ಸ್ಪಂದನ ಅವರ ಅಗಲಿಕೆಯ ನಂತರ ರಾಘು ಹಾಗೂ ಸ್ಪಂದನ ಅವರ ಕುಟುಂಬದ ಸದಸ್ಯರ ಚಿತಿಸುತ್ತಿದಿದ್ದು ರಾಘು ಅವರ ಮುಂದಿನ ಜೀವನದ ಬಗ್ಗೆ. ಏಕೆಂದರೆ ಈ ಜೋಡಿ ಓಬ್ಬರಮೇಲೆ ಮತ್ತೊಬ್ಬರು ಬಹಳ ಅವಲಂಬಿತರಾಗಿದ್ದವರು. ಹೀಗೆ ಚಿಂತಿಸುತ್ತಿದ್ದ ಅಭಿಮಾನಿಗಳಿಗೂ ಹಾಗೂ ಕುಟುಂಬದ ಸದಸ್ಯರಿಗೆ ತಮ್ಮ ಮಗನಿಗಾಗಿ ತಾವು ಎಷ್ಟು ಸ್ಟ್ರಾಂಗ್ ಎಂದು ಪ್ರೂವ್ ಮಾಡಿದ್ದಾರೆ. ಇದೀಗ ಮತ್ತೆ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಇದ್ದು ಹಾಗೂ ಕಿರುತೆರೆಗೆ ಕೂಡ ಮರಳಿದ್ದಾರೆ. ಇನ್ನೂ ನೆನ್ನೆ ರಘು ಅವರ ಚಿತ್ರ ಬಿಡುಗಡೆ ಪಡೆದಿದ್ದು. ಪ್ರೀಮಿಯರ್ ಶೋ ನಲ್ಲಿ ಸಾಕಷ್ಟು ಕಲಾವಿದರು ಹಾಗೋ ರಾಘು ಅವರ ಕುಟುಂಬಸ್ಥರು ಕೂಡ ಭಾಗಿ ಆಗಿದ್ದರು. ಆ ವೇಳೆ ರಾಘು ಅವರು ತಮ್ಮ ಮಗನಿಗೆ ಬಹಳ ಕೇರ್ ಮಾಡುತ್ತಿದ್ದದ್ದು ನೋಡಿ ಒಂದೆಡೆ ಕಣ್ಣು ತುಂಬಿ ಬಂದರೆ ಮತ್ತೊಂದೆಡೆ ರಾಘು ಅವರು ತಮ್ಮ ನೋವನ್ನು ಮರೆತು ತಮ್ಮ ಮಗನಿಗೆ ಅಮ್ಮನಾಗಿ ಅಪ್ಪನಾಗಿ ಇದ್ದಾರೆ ಎನ್ನುವುದು ಖುಷಿ ಪಡುವ ಸಂಗತಿ. ಹೀಗೆ ಅವರಿಗೆ ಯಾವ ಕಷ್ಟ ನೋವು ಬಾರದೆ ಯಶಸ್ಸನ್ನು ಪಡೆಯಲಿ ಎಂದು ನಾವೆಲ್ಲರೂ ಆಶಿಸೋಣ