ಸುದೀಪ್ ಮತ್ತು ದರ್ಶನ್ ಅಭಿಮಾನಿಗಳಗೆ ಸಕತ್ ಸಿಹಿ ಸುದ್ದಿ :ಕ್ರಾಂತಿ ಪ್ರೀ ರಿಲೀಸ್ ಇವೆಂಟ್ ಗೆ ನಟ ಸುದೀಪ್ ಚೀಫ್ ಗೆಸ್ಟ್ ?
![ಸುದೀಪ್ ಮತ್ತು ದರ್ಶನ್ ಅಭಿಮಾನಿಗಳಗೆ ಸಕತ್ ಸಿಹಿ ಸುದ್ದಿ :ಕ್ರಾಂತಿ ಪ್ರೀ ರಿಲೀಸ್ ಇವೆಂಟ್ ಗೆ ನಟ ಸುದೀಪ್ ಚೀಫ್ ಗೆಸ್ಟ್ ? ಸುದೀಪ್ ಮತ್ತು ದರ್ಶನ್ ಅಭಿಮಾನಿಗಳಗೆ ಸಕತ್ ಸಿಹಿ ಸುದ್ದಿ :ಕ್ರಾಂತಿ ಪ್ರೀ ರಿಲೀಸ್ ಇವೆಂಟ್ ಗೆ ನಟ ಸುದೀಪ್ ಚೀಫ್ ಗೆಸ್ಟ್ ?](/news_images/2022/12/sudeep-chief-guest-for-kranti-pre-release1671691756.jpg)
ಇತ್ತೀಚಿಗಷ್ಟೇ ದರ್ಶನ ಮೇಲೆ ಹೊಸಪೇಟೆಯಲ್ಲಿ ಕ್ರಾಂತಿ ಹಾಡು ಪ್ರಮೋಷನ್ ವೇಳೆ ಚಪ್ಪಲಿ ಎಸೆದ ಪ್ರಕರಣ ಎಲ್ಲೆಡೆ ಸುದ್ದಿಯಾಗಿತ್ತು . ಇದಾದ ನಂತರ ಸುದೀಪ್ ಅವರು ದರ್ಶನ ಪರವಾಗಿ ಒಂದು ಟ್ವೀಟ್ ಮಾಡಿದ್ದರು.ಯಾವದೂ ಹಾಗೂ ಯಾರೂ ಸಹ ಶಾಶ್ವತವಲ್ಲ. ಪ್ರೀತಿ ಹಾಗೂ ಗೌರವವನ್ನು ಕೊಟ್ಟು ಮರಳಿ ಪಡೆಯಿರಿ. ಇದೊಂದೇ ಯಾರನ್ನು ಬೇಕಾದರೂ ಯಾವ ಸಂದರ್ಭದಲ್ಲಾದರೂ ಗೆಲ್ಲಲು ಇರುವ ಮಾರ್ಗ ಎಂದು ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂದೇಶ ರವಾನಿಸಿದ್ದಾರೆ. ನಮ್ಮ ನಡುವೆ ಏನೆ ಬಿನ್ನಾಭಿಪ್ರಾಯ ಇದ್ದರು ನಾನು ಯಾವತ್ತೂ ದರ್ಶನ ಪರವಾಗಿ ನಿಲ್ಲುವೆ ಎಂದು ಹೇಳಿದ್ದರು.
ಇದಕ್ಕೆ ಪೂರಕವಾಗಿ ದರ್ಶನ ಅವರು ಒಂದು ಟ್ವೀಟ್ ಮಾಡಿ ನಿಮ್ಮ ಒಳ್ಳೆಯತನಕ್ಕೆ ನಾನು ಚಿರಋಣಿ ಎಂದು ಅವರು ಸಹ ಟ್ವೀಟ್ ಮಾಡಿದ್ದರು . ಈಗ ಒಂದು ಹೊಸದಾದ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ . ಅದು ಏನಪ್ಪಾ ಎಂದ್ರೆ ಇಷ್ಟು ವರ್ಷಗಳ ಕಾಲ ದರ್ಶನ ಮತ್ತು ಸುದೀಪ್ ಅವರು ದೂರವಾಗಿದ್ದರು . ಈಗ ಒಂದು ಸುವರ್ಣ ಅವಕಾಶ ಒಂದು ಒದಗಿ ಬಂದಿದೆ . ಕ್ರಾಂತಿ ಪ್ರೀ ರಿಲೀಸ್ ಇವೆಂಟ್ ಗೆ ನಟ ಸುದೀಪ್ ಚೀಫ್ ಗೆಸ್ಟ್ ಆಗಿ ಬರಬಹುದು ಎಂದು ಎಲ್ಲರೂ ಹೇಳುತ್ತಿದ್ದಾರೆ . ಈ ಸುದ್ದಿ ನಿಜವಾಗಲಿ ಎಂದು ನಾವೆಲ್ಲ ಹಾರೈಸೋಣ . ನೀವೇನಂತೀರಾ ನಿಮ್ಮ ಅನಿಸಿಕೆ ತಿಳಿಸಿ
ಮತ್ತು ನಮ್ಮ ಪೇಜ್ ಎಲ್ಲರಿಗೂ ಶೇರ್ ಮಾಡಿ ಹಾಗು ಲೈಕ್ ಮಾಡಿ ( video credit : third eye )