ಬಿಗ್ ಬಾಸ್ ಫಿನಾಲೆಗೆ ನಟ ದರ್ಶನ್ ಗ್ರಾಂಡ್ ಎಂಟ್ರಿ : ಕಿಚ್ಚ ಸುದೀಪ್ ಅದ್ದೂರಿ ಆಹ್ವಾನ
![ಬಿಗ್ ಬಾಸ್ ಫಿನಾಲೆಗೆ ನಟ ದರ್ಶನ್ ಗ್ರಾಂಡ್ ಎಂಟ್ರಿ : ಕಿಚ್ಚ ಸುದೀಪ್ ಅದ್ದೂರಿ ಆಹ್ವಾನ ಬಿಗ್ ಬಾಸ್ ಫಿನಾಲೆಗೆ ನಟ ದರ್ಶನ್ ಗ್ರಾಂಡ್ ಎಂಟ್ರಿ : ಕಿಚ್ಚ ಸುದೀಪ್ ಅದ್ದೂರಿ ಆಹ್ವಾನ](/news_images/2022/12/sudeep-invites-darshan1672124541.jpg)
ಹೌದು ಗೆಳೆಯರೇ ಇತ್ತೀಚಿಗಷ್ಟೇ ಹೊಸಪೇಟೆಯಲ್ಲಿ ದರ್ಶನ ಮೇಲೆ ಚಪ್ಪಾಳೆ ಎಸೆತ ಪ್ರಕರಣ ತುಂಬಾ ಸುದ್ದಿ ಮಾಡಿತ್ತು . ಆ ಸಮಯದಲ್ಲಿ ಕಿಚ್ಚ ಸುದೀಪ್ ಅವರು ದರ್ಶನ ಪರವಾಗಿ ಟ್ವೀಟ್ ಮಾಡಿ ಆ ಘಟನೆ ಬಗ್ಗೆ ಖಂಡಿಸಿದ್ದರು .ನಂತರ ದರ್ಶನ ಸಹ ಅದಕ್ಕೆ ಧನ್ಯವಾದ ಅರ್ಪಿಸಿದ್ದರು .
ಹೌದು, ನಟ ದರ್ಶನ್ ಅವರ ಆಪ್ತ ಸ್ನೇಹಿತ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಶೋ ಕಾರ್ಯಕ್ರಮಕ್ಕೆ ನಟ ದರ್ಶನ್ ಅವರನ್ನು ಕರೆಸಿಕೊಳ್ಳುತ್ತಾರೆ ಎಂಬ ಗಾಸಿಪ್ ವೈರಲ್ ಆಗುತ್ತಿದೆ. ನಟ ದರ್ಶನ್ ಮುಖಕ್ಕೆ ಚಪ್ಪಲಿ ಎಸೆದ ಘಟನೆಯ ನಂತರ ಕಿಚ್ಚ ಸುದೀಪ್ ಹಾಗೂ ನಟ ದರ್ಶನ್ ಅವರು ಮತ್ತೆ ಒಂದಾಗಿದ್ದಾರೆ.
ಇದೀಗ ಬಿಗ್ ಬಾಸ್ ಕಾರ್ಯಕ್ರಮಕ್ಕೆ ನಟ ದರ್ಶನ್ ಅವರು ಬರುತ್ತಾರೆ ಎಂಬ ವಿಚಾರ ಬಾರಿ ಸದ್ದು ಮಾಡುತ್ತಿದೆ. ಈ ಬಾರಿಯ ಗ್ರಾಂಡ್ ಫಿನಾಲೆಗೆ ನಟ ದರ್ಶನ್ ಅವರಿಗೆ ಕಿಚ್ಚ ಸುದೀಪ್ ಆಹ್ವಾನ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆದರೆ ಇದು ಎಷ್ಟರಮಟ್ಟಿಗೆ ನಿಜ ಎಂಬುವುದು ತಿಳಿದು ಬಂದಿಲ್ಲ. ನಟ ದರ್ಶನ್ ಅವರು ಕಿಚ್ಚನ ಮಾತಿಗೆ ಒಪ್ಪಿಕೊಂಡು ಬಿಗ್ ಬಾಸ್ ಫಿನಾಲೆಗೆ ಬರುತ್ತಾರಾ ಎಂದು ಕಾದು ನೋಡಬೇಕು. ಈ ಕುಚಿಕು ಗೆಳೆಯರನ್ನು ಬಿಗ್ ಬಾಸ್ ವೇದಿಕೆಯಲ್ಲಿ ಒಟ್ಟಾಗಿ ನೋಡಬೇಕು ಎಂಬುವುದು ಅಭಿಮಾನಿಗಳ ಮಹಾ ಆಶಯವಾಗಿದೆ. ( video credit :cine adda kannada )