ರೂಮಿನಲ್ಲಿ ವಿಜಯ್ ಮಲಗಿದ್ದ ವೇಳೆ ಪವಾಡ ಆಗಿದೆ ಎಂದ ಮಹಿಳೆ..! ಏಷ್ಟು ಸತ್ಯ ಇದೆ ನೋಡಿ

ರೂಮಿನಲ್ಲಿ ವಿಜಯ್ ಮಲಗಿದ್ದ ವೇಳೆ ಪವಾಡ ಆಗಿದೆ ಎಂದ ಮಹಿಳೆ..! ಏಷ್ಟು ಸತ್ಯ ಇದೆ ನೋಡಿ
ವಿಜಯ ರಾಘವೇಂದ್ರ ಅವರು ಇದೀಗ ಅವರ ಪ್ರೀತಿಯ ಮಡದಿ ಸ್ಪಂದನ ಅವರನ್ನು ಕಳೆದುಕೊಂಡು ತುಂಬಾನೇ ನೋವಿನಲ್ಲಿ ಇದ್ದಾರೆ. ಇಡೀ ಕುಟುಂಬ ಸ್ಪಂದನ ಅವರ ಅಗಲಿಕೆಯನ್ನು ಸುಧಾರಿಸಿಕೊಳ್ಳಲು ಇನ್ನೂ ಹೆಚ್ಚು ಸಮಯ ಬೇಕಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಚಾರಗಳು ಇವರ ಸಾವಿನ ಕುರಿತು ಹಾಗೆ ಕುಟುಂಬದ ಕುರಿತು ಮತ್ತು ಇವರ ಸ್ಪಂದನ ಅವರ ಅಗಲಿಕೆಯ ಮೂಲಕವೆ ಹಾಗಂತೆ, ಹೀಗಂತೆ ಎಂಬುದಾಗಿ ಸಾಕಷ್ಟು ವಿಚಾರಗಳನ್ನ ಹೇಳಿ ಹೆಚ್ಚು ವೈರಲ್ ಆಗುವಂತೆ ಮಾಡುತ್ತಿದ್ದಾರೆ. ಹೌದು, ವಿಜಯ ರಾಘವೇಂದ್ರ ಮಡದಿ ಸಾವನ್ನಪ್ಪಿರುವುದು ನಿಜಕ್ಕೂ ಅವರ ಕುಟುಂಬಕ್ಕೆ ಹೆಚ್ಚು ದುಃಖ ಆಗಿದೆ.
 
  
 
ಅತಿ ಸಣ್ಣ ವಯಸ್ಸಿನಲ್ಲೆ ಹೃದಯಘಾತ ಆಗಿ ದೂರ ಆಗುತ್ತಾರೆ ಎಂದರೆ, ಹಾಗೆ ಮೊನ್ನೆ ಮೊನ್ನೆ ಇದ್ದವರು ಈಗಿಲ್ಲ ಎಂದು ಅವರ ಅಗಲಿಕೆಯನ್ನ ಅರಗಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಅದು ಎಲ್ಲವೂ ನಿಜವೇ ಆಗಿದೆ. ವಾಸ್ತವ ನಂಬಿ ಅವರ ನೆನಪಿನಲ್ಲಿ ಮುಂದೆ ಜೀವನ ನಡೆಸಬೇಕು. ಆದರೆ ಇದರ ನಡುವೆ ಕೆಲ ಯೌಟ್ಯೂಬ್ ಚಾನೆಲ್ ಗಳು ವಿಡಿಯೋಗಳನ್ನು ಎಡಿಟ್ ಮಾಡುತ್ತಾ ಅವರ ಮನಬಂದಂತೆ ವಿಚಾರಗಳನ್ನು ಇವರ ಬಗ್ಗೆ ಬಿತ್ತರಿಸುತ್ತಿದ್ದಾರೆ. ಇದೀಗ ಈ ಮಹಿಳೆ ಯುಟ್ಯೂಬ್ ಮೂಲಕ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದು, ವಿಜಯ್ ಮಲಗಿದ್ದಾಗ ಅವರ ರೂಮಿನಲ್ಲಿ ಒಂದು ಪವಾಡ ಆಗಿದೆ ಎಂಬುದಾಗಿ ಶೀರ್ಷಿಕೆ ನೀಡಿ ಸುಳ್ಳು ಸುದ್ದಿಯನ್ನು ಬಿತ್ತರಿಸಿದ್ದಾರೆ.
 
ಇದನ್ನೆಲ್ಲ ವಿಜಯ ಅವರೇ ಇವರಿಗೆ ಹೇಳಿದ್ದಾರೆ ಎಂಬಂತೆ ಯಾಕೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಅದು ಏನೆಂದರೆ, ವಿಜಯ್ ಒಬ್ಬರೇ ಮಲಗಿದಾಗ ಪಾರಿವಾಳ ಕಿಟಕಿಯಲ್ಲಿ ಬಂದು ಸ್ಪಂದನ ಅವರ ಫೋಟೋ ಮುಂದೆ ಕುಳಿತಿತ್ತಂತೆ ಎಂದು ಹೇಳಿದ್ದಾರೆ. ಹಾಗೇನೆ ವಿಜಯ್ ಅವರು ಅವರ ಮಡದಿಯ ಫೋಟೋವನ್ನು ಹಿಡಿದುಕೊಂಡು ಕಣ್ಣೀರು ಸುರಿಸುತ್ತಿದ್ದಾರೆ ಎಂಬಂತೆ ಫೋಟೋ ಎಡಿಟ್ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ. ಇವರಿಗೆಲ್ಲ ಏನು ಹೇಳಬೇಕು ನೀವೇ ಹೇಳಿ. 
 
ಹೌದು ನೆಟ್ಟಿಗರು ಈ ಮಹಿಳೆ ಹಂಚಿಕೊಂಡಿರುವ ವಿಡಿಯೋಗೆ ಹೆಚ್ಚು ಕ್ಲಾಸ್ ತೆಗೆದುಕೊಂಡಿದ್ದು, ಈ ರೀತಿ ಸುಳ್ಳು ಸುದ್ದಿ ಹಬ್ಬಿಸಬೇಡಿ, ನೀವು ಆ ಕುಟುಂಬಕ್ಕೆ ಯಾಕೆ ನೋವ ನೀಡುತ್ತಿದ್ದೀರಿ, ಇದನ್ನು ಒಂದು ವೇಳೆ ಅವರು ನೋಡಿದರೆ ಹೀಗೆಲ್ಲ ನಮ್ಮ ಬಗ್ಗೆ ಬರೆಯುತ್ತಾರ ಹಾಗೇನೆ ಮತ್ತು ವಿಡಿಯೋ ಹಂಚಿಕೊಳ್ಳುತ್ತಾರ ಎಂದು ನೋವು ಮಾಡಿಕೊಳ್ತಾರೆ ಎಂಬ ಸಣ್ಣ ಅರಿವು ಇಲ್ಲವೇ ನಿಮಗೆ ಎಂದು ಸಕ್ಕತ್ ತರಾಟೆಗೆ ತೆಗೆದುಕೊಂಡಿದ್ದಾರೆ..ಇಲ್ಲಿದೆ ನೋಡಿ ಆ ವಿಡಿಯೋ, ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಮಾಹಿತಿ ಶೇರ್ ಮಾಡಿ ಧನ್ಯವಾದಗಳು.