ಈ ವರ್ಷ ಕಾದಿದೆ ದೊಡ್ಡ ಗಂಡಾಂತರ, ಉರುಳುತ್ತೆ ತಲೆಗಳು : ಆರ್ಯವರ್ಧನ್ ಗುರೂಜಿ ಭವಿಷ್ಯ

ಈ ವರ್ಷ ಕಾದಿದೆ ದೊಡ್ಡ ಗಂಡಾಂತರ, ಉರುಳುತ್ತೆ ತಲೆಗಳು : ಆರ್ಯವರ್ಧನ್ ಗುರೂಜಿ ಭವಿಷ್ಯ

ಬಿಗ್ ಬಾಸ್ ಸೀಸನ್ ಮುಕ್ತಾಯಗೊಂಡ ಮೇಲೆ ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳದ ಆರ್ಯವರ್ಧನ್ ಗುರೂಜಿ ಅವರು ಈಗ ದಿವ್ಯ ವಸಂತ ಅವರ ಜೊತೆಗೆ ಫೇಸ್ ಬುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಂಬರ್ ಅಂದರೆ ನಾನು, ನಾನು ಅಂದರೆ ನಂಬರ್ ಎಂದು ಸದಾ ಹೇಳುವ ಆರ್ಯವರ್ಧನ್ ಗುರೂಜಿ, ನಂಬರ್ ಮೂಲಕ ಜ್ಯೋತಿಷ್ಯವನ್ನು ಹೇಳುತ್ತಾರೆ. ಯಾವ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಖು. ಯಾವ ದಿನಾಂಕ ಯಾರಿಗೆ ಲಕ್ಕಿ, ಹೀಗೆ ಹಲವು ವಿಚಾರಗಳನ್ನು ಹೇಳುತ್ತಾರೆ. 

ಬಿಗ್ ಬಾಸ್ ಸೀಸನ್ 9 ರಲ್ಲಿ ಭಾಗವಹಿಸಿದಾಗಲೂ ಕೂಡ ನಂಬರ್ ಗಳಿಂದ ಭವಿಷ್ಯ ನುಡಿಯುತ್ತಿದ್ದರು. ಇನ್ನು ಆರ್ಯವರ್ಧನ್ ಅವರು ಇದೀಗ ದಿವ್ಯ ವಸಂತ ಅವರ ಜೊತೆಗೆ ಫೇಸ್ ಬುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಕೂಡ ಒಂದು ಆಘಾತಕಾರಿ ವಿಚಾರವನ್ನು ಹೇಳಿದ್ದಾರೆ. ಈ ವರ್ಷ ಒಂದು ತಿಂಗಳ ಕಾಲ ಬಹಳ ಕೆಟ್ಟ ಘಟನೆಗಳು ನಡೆಯಲಿದೆ. ದೇಶದ ಪ್ರಮುಖ ವ್ಯಕ್ತಿಯೊಬ್ಬರು ಸಾವನ್ನಪ್ಪಲಿದ್ದಾರೆ ಎಂದು ಆರ್ಯವರ್ಧನ್ ಗುರೂಜಿ ಅವರು ಹೇಳಿದ್ದಾರೆ.  

2023 ರ ಆಗಸ್ಟ್ 18 ರಿಂದ ಸೆಪ್ಟೆಂಬರ್ 17 ರ ವರೆಗೂ ದೊಡ್ಡ ಕಂಟಕ ಎದುರಾಗಲಿದೆ ಎಂದು ಹೇಳಿದ್ದಾರೆ. ಈ ಒಂದು ತಿಂಗಳ ಅವಧಿಯಲ್ಲಿ ಭೂಕಂಪ, ಪ್ರಳಯ ನಡೆಯಲಿದ್ದು, ರಾಜಕೀಯದಲ್ಲಿ ಬಹಳಷ್ಟು ಬದಲಾವಣೆಗಳು ನಡೆಯುತ್ತವೆ. ವಿಐಪಿ ವ್ಯಕ್ತಿಯೊಬ್ಬರು ಸಾವನ್ನಪ್ಪುತ್ತಾರೆ. ಬಹಳಷ್ಟು ಆಘಾತಕಾರಿ ಘಟನೆಗಳು ಈ ತಿಂಗಳ ಅವಧಿಯಲ್ಲಿ ನಡೆಯುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ದಿವ್ಯಾ ವಸಂತ ಅವರ ಜೊತೆಗೆ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ.