ತೀವ್ರ ಗಾಯಗೊಂಡ ಕಾರಣಕ್ಕೆ ಮನೆಯಿಂದ ಹೋರ ನಡೆದ ಪ್ರತಾಪ್ ಹಾಗೂ ಸಂಗೀತಾ!ಈಗ ಹೇಗಿದ್ದಾರೆ ಗೊತ್ತಾ?

ತೀವ್ರ ಗಾಯಗೊಂಡ ಕಾರಣಕ್ಕೆ ಮನೆಯಿಂದ ಹೋರ ನಡೆದ ಪ್ರತಾಪ್ ಹಾಗೂ ಸಂಗೀತಾ!ಈಗ ಹೇಗಿದ್ದಾರೆ ಗೊತ್ತಾ?

ಇನ್ನೂ ನಮ್ಮ ಕಿರುತೆರೆಯಲ್ಲಿ ನಡೆಯುತ್ತಿರುವ ಮನೋರಂಜನೆಯ ಸಂಭ್ರಮದಲ್ಲಿ ದೊಡ್ಡ ಹೈಪ್ ಪಡೆಯುವ ಶೋ ಎಂದ್ರೆ ಅದು ಬಿಗ್ ಬಾಸ್ ಕನ್ನಡ. ಇನ್ನೂ ವಾರದ ಪೂರ್ತಿ ಹಾಗೂ ವಾರದ ಅಂತ್ಯದಲ್ಲಿ ದುಪ್ಪಟ್ಟು ಮನೋರಂಜನೆ ನೀಡುವ ಇದಾಗಿದೆ. ಇನ್ನೂ ಈ ಬಾರಿ ದಶಕದ ಸಂಬ್ರಮ ಆಗಿರುವ ಕಾರಣ ಈ ಬಾರಿ ಹ್ಯಾಪಿ ಬಿಗ್ ಬಾಸ್ ಎಂದು ಘೋಷಿಸಿ ಇನ್ನೂ ಈ ಸೀಸನ್ ನಲ್ಲಿ ಪ್ರೇಕ್ಷಕರು ತಮ್ಮ ಮನೋರಂಜನೆಯನ್ನು ದುಪ್ಪಟ್ಟು ಮಾಡಬಹುದು ಎಂದು ಕೊಡ ತಿಳಿಸಿದ್ದರು. ಆದರೆ ಈ ಬಾರಿಯ ಸ್ಪರ್ಧಿಗಳ ಆಯ್ಕೆಯಲ್ಲಿ ಕೊಂಚ ಎಡವಿರುವ  ಕಾರಣ ಮನೋರಂಜನೆ ಎಂದರೆ ಕೇವಲ ಜಗಳಗಳೆ ಹೆಚ್ಚು ಎಂದ್ರೆ ತಪ್ಪಾಗಲಾರದು. ಇಲ್ಲಿ ಸ್ಪರ್ಧಿಗಳ ಮದ್ಯೆ ಆಟಕ್ಕಿಂತ ಇಗೋ ಮೇಲೆ ಸ್ಪರ್ಧಿಗಳು ಕಿತ್ತಾಡುತ್ತಿದ್ದಾರೆ ಎಂದೇ ಹೇಳಬಹುದು.

ಇನ್ನೂ ಇವರ ನಡುವಿನ ವೈಮನಸ್ಯ ಆಟವ ನಡುವೆಯೂ ಕೊಡ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಕಾರಣದಿಂದಲೇ ಆಟದ ನಡುವೆ ಜಗಳಗಳು ಹೆಚ್ಚು ನಡೆಯುತ್ತಾ ಬಂದರೆ ಆ ಮದ್ಯದಲ್ಲಿ ಆಡಿದ ಜಗಳ ಟಾಸ್ಕ್ ಮುಗಿದ ನಂತರದ ದಿನಗಳಲ್ಲಿ ಕೊಡ ಮುಂದುವರೆದು ಬರುತ್ತಿದೆ. ಇನ್ನೂ ಜಗಳ ಎಂದ್ರೆ ಹೆಚ್ಚಾಗಿ ಗುರುತಿಸಿಕೊಳ್ಳುವುದು ವಿನಯ್,ಕಾರ್ತಿಕ್,ಸಂಗೀತ, ತನೀಷ ಹಾಗೂ ನಮ್ರತಾ ಈ ಐವರಲ್ಲಿ ನನ್ನ ಮಾತು ಸರಿ ಎನ್ನುವ ನಾನತ್ವ ಹೆಚ್ಚಾಗಿರುವ ಕಾರಣದಿಂದ ಬೇರೆಯ ಸ್ಪರ್ಧಿಗಳ ಆಟ ಹುಮ್ಮಸ್ಸು ಹಾಳು ಮಾಡುವುದರ ಜೊತೆಗೆ ಮನೆಯ ವಾತಾವರಣವನ್ನು ಹಾಳು ಮಾಡುತ್ತಾ ಬಂದಿದ್ದಾರೆ.

ಇನ್ನೂ ಈ ವಾರದಲ್ಲಿ ನಡೆದ ರಾಕ್ಷಸ ಹಾಗೂ ಗಂಧರ್ವರ ಟಾಸ್ಕ್ ನಿಜಕ್ಕೂ ಆ ಮನೆಯಲ್ಲಿ ಇರುವ ಅಸಲಿ ರಾಕ್ಷಸರ ಗುಣಗಳನ್ನು ಬಯಲು ಮಾಡಿದೆ ಎಂದೇ ಹೇಳಬಹುದು . ಏಕೆಂದ್ರೆ ಇಲ್ಲಿ ನಡೆಯತ್ತಿದ್ದ ದೌರ್ಜನ್ಯ ಕೇವಲ ಟಾಸ್ಕ್ ಎಂದೇ ಸೀಮಿತವಾಗಿರಲಿಲ್ಲ ಅವರ ನಡುವಿನ ಮುನಿಸಿಗೆ ಪ್ರತೀಕಾರವನ್ನು ತೀರಿಸಿಕೊಳ್ಳುವ ರೀತಿ ಬಿಂಬಿಸುತ್ತಿದೆ. ಇದೇ ಕಾರಣಕ್ಕೆ ಆಟದ ನಡುವೆ ಸಂಗೀತ ಹಾಗೂ ಪ್ರತಾಪ್ ಅವರು ಹೆಚ್ಚಿನ ಗಾಯ ಮಾಡಿಕೊಂಡ ಕಾರಣಕ್ಕೆ ಈಗ ಆಸ್ಪತ್ರೆ ಪಾಲಾಗಿದ್ದಾರೆ. ಎರಡು ದಿನಗಳು ಕಳೆದರೂ ಕೊಡ ಇನ್ನೂ ಮನೆಗೆ ಬಂದಿಲ್ಲದೆ ಇರುವುದನ್ನು ನೋಡಿ ಇವರಿಗೆ ತೀವ್ರವಾದ ಗಾಯ ಆಗಿರುವ ಕಾರಣದಿಂದ ಮನೆಗೆ ಕಳುಹಿಸಬಹುದು ಎನ್ನುವ ಮಾತುಗಳು ಕೊಡ ಕೇಳಿ ಬಂದಿದೆ. ಆದ್ರೆ ಈ ಬಗ್ಗೆ ವಾಹಿನಿ ಅಥವಾ ಸ್ಪರ್ಧಿಗಳ ಮನೆಯವ್ರು ಕೊಡ ಯಾವ ಮಾಹಿತಿಯನ್ನು ಹೊರಹಕಿಲ್ಲ.