ಎಸಿ ಕಾರಿನಲ್ಲಿ ಓಡಾಡುವ ಎಂಎಲ್‌ಎ ಗಳ ನಡುವೆ ಸೈಕಲ್‌ ನಲ್ಲೇ ತಿರುಗಾಡುವ ಶಾಸಕ ಯಾರು ನೋಡಿ ?

ಎಸಿ ಕಾರಿನಲ್ಲಿ ಓಡಾಡುವ ಎಂಎಲ್‌ಎ ಗಳ ನಡುವೆ ಸೈಕಲ್‌ ನಲ್ಲೇ ತಿರುಗಾಡುವ ಶಾಸಕ  ಯಾರು ನೋಡಿ ?

ಭಾರತದ ರಾಜಕಾರಣ ಭ್ರಷ್ಟಾಚಾರದಲ್ಲಿ ತುಂಬಿ ತುಳುಕುತ್ತಿದೆ. ರಾಜಕಾರಣದಲ್ಲಿ ಇರುವ ಯಾವೊಬ್ಬ ವ್ಯಕ್ತಿಯೂ ನಿಯತ್ತಿನಿಂದ ಜನಸೇವೆ ಮಾಡುತ್ತಿಲ್ಲ ಎಂದು ಪ್ರತಿಯೊಬ್ಬರೂ ನಂಬಿದ್ದಾರೆ. ಆದರೆ, ದುಷ್ಟರ ನಡುವೆ ಒಳ್ಳೆಯ ವ್ಯಕ್ತಿಗಳು ಇದ್ದಾರೆ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಇದಕ್ಕೆ ನಮ್ಮ ನಿಮ್ಮ ನಡುವೆ ಹಲವು ಸಾಕ್ಷಿಗಳು ಕೂಡ ದೊರೆಯುತ್ತವೆ. ಆದರೆ, ಈಗ ನಾವು ಹೇಳೋಕೆ ಹೊರಟಿರುವುದು ಒಬ್ಬ ಶಾಸಕರ ಬಗ್ಗೆ. ಅವರ ಬಗ್ಗೆ ನೀವು ಕೇಳಿದರೆ ಶಾಕ್‌ ಆಗುವುದು ಗ್ಯಾರೆಂಟಿ. 

ಕೊಳೆತ ಈರುಳ್ಳಿ ಮೂಟೆಯಲ್ಲೂ ಒಳ್ಳೆಯ ಉಳ್ಳಾಗಡ್ಡೆ ಸಿಕ್ಕಷ್ಟೇ ನಿಮ್ಮ ಮನದಲ್ಲಿ ಒಂದು ಆಶ್ಚರ್ಯವಾಗುತ್ತದೆ. ಹೌದು.. ತೆಲಂಗಾಣದ ಖಮ್ಮಮ್‌ ಜಿಲ್ಲೆಯ ಎಲ್ಲಂದು ಕ್ಷೇತ್ರದಲ್ಲಿ ಒಬ್ಬ ಶಾಸಕರಿದ್ದಾರೆ. ಅವರ ಹೆಸರು ಗುಮ್ಮೆಡಿ ನರಸಯ್ಯ ಎಂದು. ಇವರ ಬಗ್ಗೆ ನೀವು ಎಲ್ಲಂದು ಕ್ಷೇತ್ರದಲ್ಲಿ ಯಾರನ್ನೇ ಕೇಳಿದರೂ ಎಲ್ಲರೂ ಕೈ ಮುಗಿದು ಮಾತನಾಡುತ್ತಾರೆ. ಗುಮ್ಮಡಿ ನರಸಯ್ಯ ಎಂದರೆ ಅಷ್ಟು ಗೌರವ ಜನರಿಗೆ. ಗುಮ್ಮಡಿ ನರಸಯ್ಯ ಅವರು ಜನರ ಸೇವೆಗಾಗಿ ಕಳೆದ 25 ವರ್ಷದಿಂದ ಶ್ರಮಿಸುತ್ತಿದ್ದಾರೆ.  

ಎಂಎಲ್‌ ಎ ಪಟ್ಟ ಗಳಿಸಿಕೊಳ್ಳುವುದೇ ಕಷ್ಟ. ಕೋಟಿ ಕೋಟಿ ಖರ್ಚು ಮಾಡಿ ಶಾಸಕರಾದ ಮೇಲೆ, ತಮ್ಮ ಕುಟುಂಬ ಚೆನ್ನಾಗಿರಲಿ ಎಂದು ಹಣ ಸಂಪಾಧಿಸುತ್ತಾರೆ. ಹುದ್ದೆಯಲ್ಲಿರುವವರೆಗೂ ಎಷ್ಟು ಸಾಧ್ಯವೋ ಅಷ್ಟನ್ನೂ ಬಾಚಿಕೊಳ್ಳುತ್ತಾರೆ. ಹೀಗಿರುವಾಗ ಗುಮ್ಮಡಿ ನರಸಯ್ಯ ಅವರು ಎಲ್ಲಂದು ಊರಿನಲ್ಲಿ ಬರೋಬ್ಬರಿ 5 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಎಲ್ಲಂದು ಕ್ಷೇತ್ರದ ಜನರ ಸೇವೆಯನ್ನು ನಿಷ್ಕಲ್ಮಶ ಮನಸ್ಸಿನಿಂದ ಮಾಡುತ್ತಾರೆ. ಇದುವರೆಗೂ ಒಂದೇ ಒಂದು ರೂಪಾಯಿಯನ್ನು ಕೂಡ ಅಡ್ಡದಾರಿಯಲ್ಲಿ ಸಂಪಾದನೆ ಮಾಡಿಲ್ಲ. 

ಅಷ್ಟೇ ಅಲ್ಲದೇ ಗುಮ್ಮಡಿ ನರಸಯ್ಯ ಅವರು ನಿತ್ಯ ಸೈಕಲ್‌ ನಲ್ಲಿ ಓಡಾಡುತ್ತಾರಂತೆ. ಎಸಿ ಕಾರಿನಲ್ಲಿ ಜಮ್ಮೆಂದು ತಿರುಗಾಡುವ ಶಾಸಕರ ನಡುವೆ ಗುಮ್ಮಡಿ ನರಸಯ್ಯ ಅವರು ವಿಭಿನ್ನವಾಗಿ ನಿಲ್ಲುತ್ತಾರೆ. ಎಲ್ಲೆಡೆ ಹಳೆಯ ಸೈಕಲ್‌ ನಲ್ಲಿ ಓಡಾಡುವ ಗುಮ್ಮಡಿ ನರಸಯ್ಯ ಅವರು ಊರಿಂದ ಊರಿಗೆ ತೆರಳಲು ಬಸ್‌ ಅನ್ನು ಬಳಸುತ್ತಾರಂತೆ. ಇನ್ನು ಹಳೆಯ ಮನೆ ಹಾಗೂ ಹಳೆಯ ಸೈಕಲ್‌ ಜೊತೆಗೆ ಬದುಕು ಸಾಗಿಸುತ್ತಿದ್ದಾರೆ. ಇವರು ನಿಜಕ್ಕೂ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ. ( video credit : third eye )