‘ನನ್ನ ಜೊತೆ ಮಲಗು ಎಂದ’ ಹೆಣ್ಣೂರು ಠಾಣೆ ಇನ್ಸ್‌ಪೆಕ್ಟರ್‌ ವಿರುದ್ಧ ಆಯುಕ್ತರಿಗೆ ದೂರು ನೀಡಿದ ಮಹಿಳೆ.

‘ನನ್ನ ಜೊತೆ ಮಲಗು ಎಂದ’ ಹೆಣ್ಣೂರು ಠಾಣೆ ಇನ್ಸ್‌ಪೆಕ್ಟರ್‌ ವಿರುದ್ಧ ಆಯುಕ್ತರಿಗೆ ದೂರು ನೀಡಿದ ಮಹಿಳೆ.

ದೂರು ನೀಡಲು ಹೋದ ವೇಳೆ ಹಲ್ಲೆ ನಡೆಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಹೆಣ್ಣೂರು ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ವಸಂತ್‌ ಕುಮಾರ್‌ ವಿರುದ್ಧ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

ಬಾಣಸವಾಡಿಯ ಶಕ್ತಿನಗರದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ಬುಧವಾರ ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ತೆರಳಿ ಈ ಕುರಿತು ದೂರು ನೀಡಿದ್ದಾರೆ. ಪತಿ ಹಾಗೂ ನಾಲ್ವರು ಮಕ್ಕಳೊಂದಿಗೆ ಬಾಣಸವಾಡಿಯಲ್ಲಿ ವಾಸಿಸುತ್ತಿದ್ದೇನೆ. ನನ್ನ ಪತಿ ಅನಾರೋಗ್ಯಪೀಡಿತರಾಗಿದ್ದು, ನಾನೇ ಕುಟುಂಬದ ನಿರ್ವಹಣೆ ಮಾಡುತ್ತಿದ್ದೇನೆ.   

ಶಕ್ತಿನಗರದಲ್ಲಿ ನನಗೆ ಸೇರಿದ ಮನೆಯನ್ನು ಸುಮತಿ ಎಂಬುವವರು 7 ಲಕ್ಷ ರೂ.ಗೆ ಭೋಗ್ಯಕ್ಕೆ ಪಡೆದು ವಾಸಿಸುತ್ತಿದ್ದರು. ಜ.13ರಂದು ಅವರ ಮನೆಯ ನೀರಿನ ಬಿಲ್‌ ಕೇಳಲು ಹೋದಾಗ ಸುಮತಿ, ಅವರ ಪತಿ, ಮಕ್ಕಳು, ಸಹೋದರ ಲೈಂಗಿಕ ದೌರ್ಜನ್ಯ ನಡೆಸಿ, ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಸಂಬಂಧ ದೂರು ಕೊಡಲು ಹೆಣ್ಣೂರು ಪೊಲೀಸ್‌ ಠಾಣೆಗೆ ಹೋದಾಗ ಇನ್ಸ್‌ಪೆಕ್ಟರ್‌ ವಸಂತ್‌ ಕುಮಾರ್‌ ಕೂಡ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೆಖಿಸಿದ್ದಾರೆ.

5 ಲಕ್ಷ ರೂ.ಗೆ ಬೇಡಿಕೆ:

ಪ್ರಕರಣದಲ್ಲಿ ನನ್ನ ವಿರುದ್ಧ ಸುಳ್ಳು ದೌರ್ಜಧಿನ್ಯ ಪ್ರಕರಣ ದಾಖಲಿಸಿದ್ದಾರೆ. ನನ್ನನ್ನು ಠಾಣೆಗೆ ಕರೆಸಿದ ಇನ್ಸ್‌ಪೆಕ್ಟರ್‌ ವಸಂತ್‌ ಕುಮಾರ್‌ ‘ನಿನಗೆ ಎರಡು ಆಯ್ಕೆ ಕೊಡುತ್ತೇನೆ. ಒಂದು ನೀನು ನನಗೆ 5 ಲಕ್ಷ ರೂ. ಕೊಡಬೇಕು. ಇಲ್ಲವಾದರೆ ಕರೆದಾಗಲೆಲ್ಲ ಬಂದು ನನ್ನ ಜತೆಗೆ ಮಲಗು’ ಎಂದು ಬೇಡಿಕೆಯಿಟ್ಟರು ಎನ್ನಲಾಗಿದೆ.

‘ನಾನು ಮರ್ಯಾದಸ್ಥ ಕುಟುಂಬದವಳು. ನೀವು ಕೇಸ್‌ ಹಾಕಿ” ಎಂದು ಹೇಳಿದೆ. ಅದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ”ಅವರ ಜತೆ ನಾನೇ ನಿಂತು ಇನ್ನೂ 10 ಕೇಸ್‌ ಹಾಕಿಸುತ್ತೇನೆ ಎಂದು ಮೈಕೈ ಹಿಡಿದು ಎಳೆದಾಡಿ, ನನ್ನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ನಾನು ಒಂದು ತಿಂಗಳ ನಂತರ ಜಾಧಿಮೀಧಿನಿಧಿನ ಮೇಲೆ ಹೊರಬಂದಿದ್ದೇನೆ” ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಅವಾಚ್ಯ ಶಬ್ದಗಳಿಂದ ನಿಂದನೆ:
ಸುಮತಿ ಮತ್ತು ಇತರರನ್ನು ಎತ್ತಿಕಟ್ಟಿ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಕುಮ್ಮಕ್ಕು ನೀಡಿದ್ದು, ನಾನು ವೈದ್ಯಕೀಯ ವರದಿಯೊಂದಿಗೆ ದೂರು ನೀಡಿದರೂ ಸ್ವೀಕರಿಸಲಿಲ್ಲ. ನಾನು ಡಿಸಿಪಿ ಮತ್ತು ಎಸಿಪಿ ಅವರನ್ನು ಭೇಟಿಯಾಗಿ ದೂರು ನೀಡಿದಾಗ ಅವರು ಮತ್ತೆ ಇನ್ಸ್‌ಪೆಕ್ಟರ್‌ ಅನ್ನು ಭೇಟಿಯಾಗಲು ತಿಳಿಸಿದರು.

ನಾನು ಮತ್ತೆ ವಸಂತ್‌ ಕುಮಾರ್‌ ಅವರನ್ನು ಭೇಟಿ ಮಾಡಿ ಎಸಿಪಿ ಅವರು ನನ್ನ ದೂರಿನ ಮೇಲೆ ಬರೆದಿರುವ ಸೂಚನೆ ತೋರಿಸಿ ಎಫ್‌ಐಆರ್‌ ದಾಖಲಿಸಲು ಹೇಳಿದರೂ, ಮತ್ತೆ ಅವಾಚ್ಯ ಶಬ್ದಗಧಿಳಿಂದ ನಿಂದಿಸಿದರು. ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿ, ನಾನು ಒಪ್ಪದೇ ಇದ್ದಾಗ ಅವರು ಮಾತನಾಡಿದ ಆಡಿಯೊ ಇದ್ದ ನನ್ನ ಮೊಬೈಲ್‌ ಫೋನ್‌ ಒಡೆದು ಹಾಕಿ ದೌರ್ಜನ್ಯವೆಸಗಿದ್ದಾರೆ, ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ಆರೋಪ ತಳ್ಳಿಹಾಕಿದ ಇನ್‌ಸ್ಪೆಕ್ಟರ್‌:
ಮಹಿಳೆಯ ಆರೋಪವನ್ನು ತಳ್ಳಿಹಾಕಿರುವ ಇನ್‌ಸ್ಪೆಕ್ಟರ್‌ ವಸಂತ್‌ ಕಮಾರ್‌, “ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದಾರೆ. ಮಹಿಳೆಯ ಜತೆ ನಾನು ಅನುಚಿತವಾಗಿ ವರ್ತಿಸಿಲ್ಲ,” ಎಂದು ಸ್ಪಷ್ಟನೆ ನೀಡಿದ್ದಾರೆ.

VIDEO CREDIT : NEWS18 KANNADA