ತಮಾಷೆ ಮಾಡಲು ಹೋಗಿ ಪ್ರಾಣ ಕಳೆದು ಕೊಂಡ ನಟ : ಹೆಂಡತಿ ಗರ್ಭಿಣಿ ಆಗಿದ್ದಾಗಲೇ ಹಾರಿಹೋಯ್ತು ಪ್ರಾಣಪಕ್ಷಿ

ತಮಾಷೆ ಮಾಡಲು ಹೋಗಿ ಪ್ರಾಣ  ಕಳೆದು ಕೊಂಡ    ನಟ : ಹೆಂಡತಿ ಗರ್ಭಿಣಿ ಆಗಿದ್ದಾಗಲೇ ಹಾರಿಹೋಯ್ತು ಪ್ರಾಣಪಕ್ಷಿ

ಇತ್ತೀಚೆಗೆ ಯುವಜನತೆ ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಎಲ್ಲಾ ಪ್ರಕರಣಗಳೂ ಹೆಚ್ಚಾಗಿ ಪ್ರೀತಿ-ಪ್ರೇಮದ್ದೇ ಆಗಿರುತ್ತದೆ. ಇದರ ಜೊತೆಗೆ ಮದುವೆಯಾದ ನವ ದಂಪತಿಗಳಲ್ಲಿ ಬಿರುಕು ಮೂಡಿ ಯುವಕ ಹಾಗೂ ಯುವತಿಯರು ಸೂಸೈಡ್ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲವೂ ಮುಂದಿನ ಪೀಳಿಗೆಗೆ ಇನ್ನಷ್ಟು ಮಾರಕವಾಗಬಹುದು. ಸಣ್ಣ-ಪುಟ್ಟ ಕಾರಣಗಳಿಗೆ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ಚಿಕ್ಕ ಚಿಕ್ಕ ವಿಚಾರಕ್ಕೂ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದೆಲ್ಲಾ ಬೆಳವಣಿಗೆಗಳು ಕಂಡರೆ ಮುಂದಿನ ಪೀಳಿಗೆ ಮಕ್ಕಳಲ್ಲಿ ಮತ್ತಷ್ಟು ಮಾನಸಿಕ ಸೂಕ್ಷ್ಮತೆಗಳು ಹೆಚ್ಚಾಗಿ, ಇದರಿಂದ ಕಷ್ಟ, ಸಮಸ್ಯೆಗಳನ್ನು ಎದುರಿಸುವುದೇ ಕಷ್ಟವಾದಂತಿದೆ. 

ಇದೀಗ ಕನ್ನಡ ಕಿರುತೆರೆಯ ನಟ ಸಂಪತ್‌ ರಾಜ್‌ 2 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 35 ವರ್ಷದ ಸಂಪತ್‌ಗೆ ಕಿರುತೆರೆಯಲ್ಲಿ ಸರಿಯಾದ ಅವಕಾಶ ದೊರೆಯುತ್ತಿರಲಿಲ್ಲ. ಇದೇ ಕಾರಣಕ್ಕಾಗಿ ಸಾವಿನ ಕದ ತಟ್ಟಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಒಳ್ಳೆಯ ಹೆಸರು ಪಡೆದಿದ್ದ ಸಂಪತ್‌ ರಾಜ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಕಲಾವಿದರಿಗೆ ಶಾಕ್‌ ಕೊಟ್ಟಿದೆ. ಸಂಪತ್ ಸಾವಿನ ಬಗ್ಗೆ ಅನೇಕ ಊಹಾಪೋಹಗಳು ಹರಿದಾಡುತ್ತಿವೆ. ಆತನ ಮಾನಸಿಕ ಸ್ಥಿತಿ ಸರಿ ಇರಲಿಲ್ಲ. ಗಂಡ ಹೆಂಡತಿ ನಡುವೆ ಮನಸ್ತಾಪ ಇತ್ತು. ನಟನೆಯಲ್ಲಿ ಅವಕಾಶಗಳು ಸಿಗಲಿಲಲ್ಲ ಎಂದು ಸುದ್ದಿಯಾಗುತ್ತಿದೆ.   

ಸಂಪತ್ ರಾಜ್ ಸುಮಾರು 11 ವರ್ಷಗಳ ಕಾಲ ಪ್ರೀತಿಸಿ ಚೈತನ್ಯ ಎಂಬ ಯುವತಿಯನ್ನು ಮದುವೆಯಾಗಿದ್ದರು. ಆಕೆಗೆ ಈಗ 5 ತಿಂಗಳು. ಗರ್ಭಿಣಿ ಆಗಿರುವ ಸಂದರ್ಭದಲ್ಲೇ ಸಂಪತ್‌ ಸೂಸೈಡ್‌ ಮಾಡಿಕೊಂಡಿದ್ದಾರೆ. ಇಬ್ಬರದ್ದೂ ಅಂತರ್ಜಾತಿ ವಿವಾಹ. 'ಸಂಸಾರದಲ್ಲಿ ಸಣ್ಣ ಪುಟ್ಟ ಗಲಾಟೆ ಇದ್ದೇ ಇರುತ್ತದೆ. ಹೀಗೆ ಪತ್ನಿ ಜೊತೆಗೆ ಜಗಳವಾಡಿದ ಸಂಪತ್‌ ರಾಜ್‌ ಸಾಯುತ್ತೇನೆ ಎಂದು ಹೆಂಡತಿಗೆ ಹೆದರಿಸಲು ಮುಂದಾಗಿದ್ದಾನೆ. 

ವಿಧಿಯಾಟ ಎಂಬಂತೆ ಹೆದರಿಸಲು ಸೂಸೈಡ್‌ ಗೆ ಮುಂದಾದ ಸಂಪತ್‌ ರಾಜ್‌ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇದೀಗ ಸಣ್ಣ ಎಡವಟ್ಟಿನಿಂದ ಸಂಪತ್‌ ರಾಜ್‌ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದರೆ, ದಶಕಗಳ ಕಾಲ ಪ್ರೀತಿಸಿ ಮದುವೆಯಾದ ಪತ್ನಿ ಒಂಟಿಯಾಗಿದ್ದಾಳೆ. ಹೊಟ್ಟೆಯಲ್ಲಿ ಪತಿಯ ಮಗುವನ್ನು ಹೊತ್ತಿರುವ ಚೈತನ್ಯ ಗಂಡನನ್ನು ಕಳೆದುಕೊಂಡು ಅನಾಥರಾಗಿದ್ದಾರೆ.