ಸ್ಯಾಂಡಲ್​ವುಡ್​ನ ಖ್ಯಾತ ನಟಿ ಅರೆಸ್ಟ್ ? ಕಾರಣ ಏನು ನೋಡಿ

ಸ್ಯಾಂಡಲ್​ವುಡ್​ನ  ಖ್ಯಾತ ನಟಿ ಅರೆಸ್ಟ್ ?  ಕಾರಣ ಏನು ನೋಡಿ

ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಹೋಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ನಟಿಯೊಬ್ಬಳು ಸಿಕ್ಕಿ ಬಿದ್ದಿದ್ದಾಳೆ.

ಎಡಿಜಿಪಿ ರಾಮಚಂದ್ರರಾವ್ ಅವರ ಪುತ್ರಿ ಆಗಿರುವ ರನ್ಯಾ ರಾವ್‌  ಕನ್ನಡದಲ್ಲಿ ಕಿಚ್ಚ ಸುದೀಪ್‌ ಜೊತೆಗೆ ಮಾಣಿಕ್ಯ ಸಿನೆಮಾ ಸೇರಿದಂತೆ  ಪಟಾಕಿ ಹಾಗೂ ತಮಿಳಿನ 'ವಾಘಾ' ಸಿನಿಮಾಗಳಲ್ಲಿ ರನ್ಯಾ ರಾವ್ ನಟಿಸಿದ್ದರು.

ಸುಮಾರು 15ಕೆಜಿ ಚಿನ್ನ ಅಕ್ರಮ ಸಾಗಾಟ ಆರೋಪದಲ್ಲಿ ನಟಿ ರನ್ಯಾ ರಾವ್ ರನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಾರ್ಚ್ 4ರ ಮಧ್ಯರಾತ್ರಿ ಬೆಂಗಳೂರು ವಿಮಾಣ ನಿಲ್ದಾಣದಲ್ಲಿ ಚಿನ್ನ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರನ್ಯಾ ದುಬೈನಿಂದ ಬೆಂಗಳೂರಿಗೆ ಮಾರ್ಚ್ 3ರ ಮಧ್ಯರಾತ್ರಿ ಆಗಮಿಸಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ  ಡಿಆರ್‌ಐ ಅಧಿಕಾರಿಗಳು ಮಾರ್ಚ್‌4ರಂದು ರಾತ್ರಿ ನಟಿ ರನ್ಯಾ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿದೇಶದಿಂದ ಹೆಚ್ಚುವರಿ ಗೋಲ್ಡ್ ತಂದ  ಆರೋಪ ರನ್ಯಾ ಮೇಲೆ ಇದೆ. ನಿನ್ನೆ ರಾತ್ರಿಯೇ  ನಾಗವಾರದ ಡಿಆರ್ ಐ ಕಛೇರಿಗೆ ಕರೆತಂದ ಅಧಿಕಾರಿಗಳು ವಿಚಾರಣೆ ನಡೆಯುತ್ತಿದ್ದಾರೆ.

ರನ್ಯಾ ರಾವ್ ಅವರು 28 ಮೇ 1993 ರಂದು ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಜನಿಸಿದರು. 2014 ಕಿಚ್ಚ ಸುದೀಪ್‌ ನಾಯಕನಾಗಿ ನಟಿಸಿ ನಿರ್ದೇಶಿಸಿದ್ದ ಮಾಣಿಕ್ಯ ಚಿತ್ರ ರನ್ಯಾ ರಾವ್‌ ಅವರ ಮೊದಲ ಚಿತ್ರವಾಗಿತ್ತು.  2017 ರಲ್ಲಿ ಬಿಡುಗಡೆಯಾದ ಗಣೇಶ್ ಅಭಿನಯದ ಕನ್ನಡದ ಹಾಸ್ಯ ಚಿತ್ರ ಪಟಾಕಿಯಲ್ಲಿ  ಪತ್ರಕರ್ತೆ ಪಾತ್ರ ನಿರ್ವಹಿಸಿದರು.  video credit : Anand audio kannada )