ಫೈನಲ್ ಗೆ ಸೆಲೆಕ್ಟ್ ಆಗದೆ ಇದ್ದರು ಲಹರಿ ಗೆ ಸಿನಿಮಾ ದಲ್ಲಿ ಹಾಡಲು ಅವಕಾಶ, ಕೊಟ್ಟದು ಯಾರು ನೋಡಿ

ಒಟ್ಟು ಆರು ಸ್ಪರ್ಧಿಗಳು ಫಿನಾಲೆಗೆ ಆಯ್ಕೆಯಾಗಿದ್ದಾರೆ ತಲುಪಿದ್ದಾರೆ. ಇವರಲ್ಲಿ ಮೈಸೂರಿನ ಲಹರಿ ಇರ್ಬೇಕಿತ್ತು. ಅತ್ಯುತ್ತಮ ಪ್ರತಿಭೆ ಲಹರಿ. ಕನ್ನಡದ ಭವಿಷ್ಯದ ಶ್ರೇಯಾ ಘೋಷಲ್ ಲಹರಿ ಪುಟ್ಟ. ಪ್ರಾರಂಭದಿಂದಲೂ ಅದ್ಭುತವಾಗಿ ಹಾಡಿರೋ ಲಹರಿ ಫಿನಾಲೆಗೆ ಕೈಬಿಟ್ಟದ್ದು ಸರಿಯಲ್ಲ. ಇದು ಮೋಸ ಅಂತ ವೀಕ್ಷಕರು ಆಕ್ರೋಶ ಹೊರ ಹಾಕ್ತಿದ್ದಾರೆ.ಸರಿಗಮಪ ಅದ್ಧೂರಿ ಫಿನಾಲೆಗೆ ಕೌಂಟ್ಡೌನ್ ಶುರುವಾಗಿದೆ. ಶಿವಾನಿ, ರಶ್ಮಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಕಾಲಿಟ್ಟಿದ್ದಾರೆ. ಆದ್ರೆ ಇಬ್ಬರು ಸ್ಪರ್ಧಿ ಬಗ್ಗೆ ಜನ ಬೇಸರ ಹೋರ ಹಾಗ್ತಿದ್ದಾರೆ. ಇವರು ಫಿನಾಲೆಯಲ್ಲಿ ಇರಲೇಬೇಕು ಅನ್ನೋ ಕೂಗು ಜೋರಾಗಿದೆ.
14 ವರ್ಷದ ಲಹರಿ ಮಹೇಶ್ ಮೈಸೂರಿನ ಪ್ರತಿಭೆ. ನಾಗಾರಾಜ್ ಟೀಮ್ಗೆ ಆಯ್ಕೆ ಆಗಿದ್ರು. ಸರಿಗಮಪ ಸೀಸನ್ಗೆ ಗೆಸ್ಟ್ ಆಗಿ ಬಂದಿರೋ ಇಂಡಸ್ಟ್ರಿಯ ದಿಗ್ಗಜರು ಲಹರಿಯನ್ನ ಹಾಡಿ ಹೊಗಳಿದ್ದಾರೆ. ಇನ್ಫ್ಯಾಕ್ಟ್ ಸೆಮಿ ಫಿನಾಲೆಯಲ್ಲಿ ಅರ್ಜುನ್ ಜನ್ಯ ಅವರು ಸಿನಿಮಾಗೆ ಹಾಡಲು ಲಹರಿಗೆ ಆಫರ್ ಕೊಟ್ಟಿದ್ದಾರೆ. ಲಹರಿ ಹಾಗೂ ಸಂಚಿತ್ ಹೆಗ್ಡೆ ಅವರನ್ನ ಹೊಲಿಸುತ್ತಿದ್ದು, ಶೋ ಫಿನಾಲೆಗೆ ಬರದಿದ್ರು ದೇಶ ಮೆಚ್ಚುವಂತೆ ಸಾಧನೆ ಮಾಡು ಲಹರಿ ಭವಿಷ್ಯದ ಸೂಪರ್ ಸ್ಟಾರ್ ಶ್ರೇಯಾ ಘೋಷಾಲ್ ಅಂತ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.
ಇನ್ನೂ, ಲಹರಿ ಕೂಡ ವಿಡಿಯೋ ಬೈಟ್ ರಿಲೀಸ್ ಮಾಡಿದ್ದು, ಇಷ್ಟು ದಿನ ಸಪೋರ್ಟ್ ಮಾಡಿದ್ದ ಸಂಗೀತ ಪ್ರಿಯರಿಗೆ ಧನ್ಯವಾದ ಅರ್ಪಿಸಿದ್ದಾರೆ. ಒಟ್ಟಿನಲ್ಲಿ ಸೆಮಿ ಫಿನಾಲೆ ಮುಗಿದು ವಾರ ಕಳೆದ್ರು ಲಹರಿ ಪರ ಚರ್ಚೆ ಆಗ್ತಾನೆ ಇದೆ. ಸೋಲು ಗೆಲುವು ಇದ್ದಿದ್ದೇ ಆದ್ರೇ ಜನರ ಮನಸ್ಸು ಗೆಲ್ಲೋದು ಮುಖ್ಯ, ಈ ವಿಚಾರದಲ್ಲಿ ಲಹರಿ ಗೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಅನ್ನೋದು ಅಭಿಮಾನಿಗಳ ಆಶಯವಾಗಿದೆ.
ಜನರು ಫೈನಲ್ ಗೆ ಬರದೇ ಇದ್ದರು ಲಹರಿಗೆ ತುಂಬಾ ಸಪೋರ್ಟ್ ಮಾಡಿದ್ದಾರೆ . ಅವರೇ ನಿಜವಾದ ವಿನ್ನರ್ ಎಂದು ಹೇಳಿದ್ದಾರೆ . ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗು ನಮ್ಮ ಪೇಜ್ ಲೈಕ್ ಮಾಡಿ
ಪ್ರೇಕ್ಷಕರು ಯಾವ ರೀತಿ ಲಹರಿ ಬಗ್ಗೆ ಕಾಮೆಂಟ್ ಮಾಡಿದ್ದಾರೆ ನೋಡಿ
"ಮಧುರಕಂಠ ಹಾಗೂ ಇಂಪಾಗಿ ಹಾಡಿದ ಲಹರಿ ಹಾಗೂ ಬಳ್ಳಾರಿ ಸುದೀಕ್ಷಾ ರವರುಗಳೇ ಅಂತಿಮ ಸುತ್ತಿಗೆ ಆಯ್ಕೆ ಮಾಡಬೇಕಾಗಿದ್ದ ವರು. ಈ ಇಬ್ಬರೇ ನಿಜವಾದ ವಿನ್ನರ್ ಗಳು.ಈ ಕಾರ್ಯಕ್ರಮದಲ್ಲಿ ಅರ್ಹತೆಗೆ ಬೆಲೆ ಇಲ್ಲ.ಈ ರೀತಿ ಮೋಸ ಮಾಡುವ ಮೂಲಕ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುವ ಇಂತಹ ಕಾರ್ಯಕ್ರಮಗಳನ್ನು ನೋಡದಿರುವುದೇ ಒಳಿತು."
"ನಿಜವಾದ ಕಲೆಗೆ ಶ್ರಮಕ್ಕೆ ನಿಮ್ಮಲ್ಲಿ ಬೆಲೆ ಇಲ್ಲಾ ಬರೀ ಗಿಮಿಕ್ ಗೆ ಬೆಲೆ ಅನ್ನೋದನ್ನ ಮತ್ತೊಮ್ಮೆ ಪ್ರೊ ಮಾಡಿದ್ರಿ ಜೀ ಕನ್ನಡ"
"ಸರ್ ದಯವಿಟ್ಟು ಈ ಕಾಮೆಂಟ್ಸ್ ಆದ್ರು ನೋಡಿ ಲಹರಿ ನಾ ವಾಪಸ್ ಕರೆಸಿ ವಿನ್ ಮಾಡಿಸಿ ಸರ್"