34 ಲಕ್ಷ ವೋಟ್ ಬಂದಿದ್ದರು ಕೊಡ ನಾನು ಮನೆಗೆ ಹೋಗಬೇಕು !! ಕಾರಣ ಏನೂ ಗೊತ್ತಾ?

34 ಲಕ್ಷ ವೋಟ್ ಬಂದಿದ್ದರು ಕೊಡ ನಾನು ಮನೆಗೆ ಹೋಗಬೇಕು !! ಕಾರಣ ಏನೂ ಗೊತ್ತಾ?

ಇನ್ನೂ ನಮ್ಮ ಕನ್ನಡ ಬಿಗ್ ಬಾಸ್ ಶೋ ಈಗ ಐದನೇ ವಾರ ಕೊಡ ತುಂಬಿಸಿ ಆರನೇ ವಾರಕ್ಕೆ ಕಾಲಿಟ್ಟಿದೆ. ಇದೀಗ ಈ ಐದು ವಾರ ಮನೆಯಲ್ಲಿ ಇರುವ ಎಲ್ಲಾ ಸ್ಪರ್ಧಿಗಳು ತಮ್ಮ ನಿಲುವನ್ನು ಕೊಂಚವಾದರೂ ತೆಗೆದುಕೊಂಡಿದ್ದಾರೆ ಎನ್ನಬಹುದು. ಇನ್ನೂ ಕಳೆದ ಎಲ್ಲಾ ಸೀಸನ್ ಗಳಿಗಿಂತಲೂ ಈ ಸೀಸನ್ ಕೊಂಚ ವಿಭಿನ್ನತೆಯನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಕಳೆದ ಸೀಸನ್ ಗಳಲ್ಲಿ ಮೊದಲ ಎರಡು ವಾರಗಳಲ್ಲಿ  ತಮ್ಮ ತಮ್ಮ ಕಂಫರ್ಟ್ ಜೋನ್ ಕಂಡುಕೊಂಡು ಮನೆಯಲ್ಲಿ ತಮ್ಮ ನಿಲುವನ್ನು ಪಡೆದುಕೊಂಡಿರುವರು. ಆದ್ರೆ ಈ ಸೀಸನ್ ನಲ್ಲಿ ಒಬ್ಬರ ಮೇಲೆ ಒಬ್ಬರು ದಿನ ನಿತ್ಯದ ಜಗಳಗಳನ್ನೆ ಹೆಚ್ಚಾಗಿ ಮಾಡುತ್ತಿದ್ದಾರೆ ಹೊರತು ಇಂದಿಗೂ ಮನೋರಂಜನೆಯ ಪುಟವನ್ನು ಕೊಂಚವೂ ತೆರೆದಿಲ್ಲ.   

ಇನ್ನೂ ಈಗಾಗಲೇ ಬಿಗ್ ಬಾಸ್ ಸ್ಪರ್ಧಿಗಳು ಒಬ್ಬರಾಗಿ ಮನೆಯನ್ನು ಕಾಲಿ ಮಾಡುತ್ತಾ ಬರುತ್ತಿದ್ದಾರೆ. ಮೊದಲ ವಾರದಲ್ಲಿ ಸ್ನೇಕ್ ಶ್ಯಾಮ್ ನಿಂದಾ ಶುರುವಾದ ಎಲಿಮಿನೇಷನ್ ಪಯಣ ಈಗ ಸದ್ಯದಲ್ಲಿ ಬುಲೆಟ್ ಪ್ರಕಾಶ್ ಮಗ ಎಂದೇ ಪ್ರಸಿದ್ದಿ ಪಡೆದಿರುವ ರಕ್ಷಖ್ ಬುಲೆಟ್ ವರೆಗೂ ಬಂದು ನಿಂತಿದೆ. ಇನ್ನೂ ಐದನೇ ವಾರದ ಎಲಿಮಿನೇಷನ್ ನಲ್ಲಿ ಕೊನೆಯ ಹಂತದಲ್ಲಿ ಉಳಿದಿರುವ ಇಶಾನಿ, ನೀತು ಹಾಗೂ ವರ್ತೂರು ಅವರು ಡೇಂಜರ್ ಜೂನ್ ನಲ್ಲಿ ಉಳಿದಿದ್ದರು. ಇನ್ನೂ ಭಾನುವಾರದ ಎಪಿಸೋಡ್  ನಲ್ಲಿ ಫಲಾತಾಂಶವನ್ನ  ಕಾಯ್ದಿರಿಸಿದ್ದರು ಇದೀಗ ಈಶಾನಿ ಅವರು ಅಲ್ಲಿ ಇದ್ದವರ ಪೈಕಿ ಕಡಿಮೆ ವೋಟ್ ಪಡೆದುಕೊಂಡ ಕಾರಣ ಎಲಿಮಿನೇಟ್ ಎಂದು ಕಿಚ್ಚ ಸುದೀಪ್ ಎಲಿಮಿನೇಟ್ ಎಂದು ಘೋಷಣೆ ಮಾಡಿದ್ದರು.

ಆದರೆ ವರ್ತೂರು ಸಂತೋಷ್ ಅವರು ತನಗೆ ಹೊರಗಡೆ ಆಗಿರುವ ಘಟನೆಗಳ ಕಾರಣದಿಂದ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಇನ್ನೂ ಆಟ ಹಾಗೂ ಮನೆಯಲ್ಲಿ ಜನರ ಒಡಾನಾಟಗಳನ್ನ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನನ್ನನ್ನು ಮನೆಯಿಂದ ಹೊರಗಡೆ ಕಳುಹಿಸಿ ಎಂದು ಕೇಳಿಕೊಳ್ಳುತ್ತಾರೆ. ಆದ್ರೆ ಕಿಚ್ಚ ಸುದೀಪ್ ಅವರು ನಿಮಗೆ 34ಲಕ್ಷಕ್ಕೂ ಅಧಿಕ ವೋಟ್ ಬಂದಿದ್ದು ನೀವು ಇವರನ್ನು ದಿಕ್ಕರಿಸಿ ಹಾಗೂ ಇವರ ಪ್ರೀತಿಯನ್ನು ತಿರಸ್ಕರಿಸಿ ಹೋರ ನಡೆದಂತೆ ಇದರ ಮೇಲೆ ನಾನೂ ಇನ್ನೂ ಬೇರೇನೂ ಹೇಳಲು ಇಚ್ಚಿಸುವುದಿಲ್ಲ ಎಂದು ಸ್ಟೇಜ್ ಮೇಲಿಂದ ಹೋರ ನಡೆದಿದ್ದಾರೆ. ಅದಾದ ಬಳಿಕ ಈವಾರದ ಎಪಿಸೋಡ್ ಮುಗಿದ ಬಳಿಕ ವರ್ತೂರು ಅವರು ಮನ ಬದಲಾಯಿಸುತ್ತಾರ ಇಲ್ಲವಾ ಎಂದು ನಾವು ಕಾದು ನೋಡಬೇಕಿದೆ.