ದಿವ್ಯಾ ವಸಂತ ಇಂದ ಜ್ಯೋತಿಷಿ ಆನಂದ್ ಗುರೂಜಿಗೆ ಬ್ಲಾಕ್ಮೇಲ್ !ಮತ್ತೆ ಅರೆಸ್ಟ್ ಆಗುತ್ತಾರಾ ?

ರಾಜ್ಯ ಖುಷಿಪಡೋ ಸುದ್ದಿ ಕೊಟ್ಟ ನಿರೂಪಕಿ ದಿವ್ಯಾ ವಸಂತ ಸಂಬಂಧಿಸಿದ ದೊಡ್ಡ ಸುದ್ದಿ ಇದು. ಕಂಬಿ ಎಣಿಸಿದ್ರೂ ದಿವ್ಯಾ ವಸಂತಗೆ ಬಂದಿಲ್ವಾ? ದಿವ್ಯಾ ವಸಂತ ಮೇಲೆ ಮತ್ತೆ ಬ್ಲ್ಯಾಕ್ಮೇಲ್ ಆರೋಪ ಕೇಳಿಬಂದಿದೆ. ಖ್ಯಾತ ಜ್ಯೋತಿಷಿ ಆನಂದ್ ಗುರೂಜಿಗೆ ದಿವ್ಯಾ ಗ್ಯಾಂಗ್ ಬ್ಲ್ಯಾಕ್ಮೇಲ್ ಮಾಡಿದೆ ಎನ್ನುವ ಆರೋಪ ಇದ್ದು ಈ ಸಂಬಂಧ ಬೆಂಗಳೂರಿನ ಚಿಕ್ಕಜಾಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬ್ಲಾಕ್ ಮೇಲ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆಂದು ಆನಂದ್ ಗುರೂಜಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆರೋಪಿ ನಂ.1 ಕೃಷ್ಣಮೂರ್ತಿ, ಆರೋಪಿ ನಂ.2 ದಿವ್ಯಾ ವಸಂತ್ ಆಗಿದ್ದು, ಬೆಂಗಳೂರಿನ ಚಿಕ್ಕಜಾಲ ಪೊಲೀಸರಿಂದ ತನಿಖೆ ನಡೆಯುತ್ತಿದೆ.
ಕಳೆದ ತಿಂಗಳು ಏಪ್ರಿಲ್ 18ರಂದೇ ಚಿಕ್ಕಜಾಲ ಠಾಣೆಯಲ್ಲಿ FIR ದಾಖಲಾಗಿದ್ದು, ಕೇಸ್ ದಾಖಲಾಗ್ತಿದ್ದಂತೆ ವಿಚಾರಣೆಗೆ ಬರುವಂತೆ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. ಅಶ್ಲೀಲ ವಿಡಿಯೋ ಇದೆ ಎಂದು ಬ್ಲಾಕ್ಮೇಲ್ ಮಾಡಿರುವ ದಿವ್ಯಾ ವಸಂತ ಗ್ಯಾಂಗ್ ಅಶ್ಲೀಲ ವೀಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡೋದಾಗಿ ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರಂತೆ. ಹಣ ಕೊಡದೇ ಇದ್ದಿದ್ದಕ್ಕೆ ಕೊಲೆ ಬೆದರಿಕೆ, ಜೊತೆಗೆ ಯುಟ್ಯೂಬ್ ಚಾನಲ್ ಸಾಮ್ರಾಟ್ ಟಿವಿ ಮತ್ತು ಹೆಸರಿನ ಯೂಟ್ಯೂಬ್ ಚಾನೆಲ್ ಗಳಲ್ಲಿ ಚಾರಿತ್ರ್ಯ ತೇಜೋವಧೆ ಮೂಲಕ ಮಾನಹಾನಿ ಸುದ್ದಿ ಪ್ರಸಾರ ಮಾಡಿದ್ದಾರೆ ಎಂದು ಆನಂದ್ ಗುರೂಜಿ ದೂರಿನ ಆಧಾರದಲ್ಲಿ FIR ದಾಖಲಾಗಿದೆ.
ಆನಂದ್ ಗುರೂಜಿಗೆ ಹಣಕ್ಕೆ ಬೇಡಿಕೆ ಇಟ್ಟು ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಗುರೂಜಿ ಆಡಿಯೋ ಎಡಿಟ್ ಮಾಡಿ ಪ್ರಸಾರ ಮಾಡಲಾಗಿದೆ. ನಾನು ಸನ್ಯಾಸಿಯಲ್ಲ ಅನ್ನೋ ಆಕ್ರೋಶದ ಮಾತು ಎಂದು ಗುರೂಜಿ ಆಡಿಯೋ ವೈರಲ್ ಮಾಡಿದ್ದ ಗ್ಯಾಂಗ್. ಅಶ್ಲೀಲ ವಿಡಿಯೋ ಬಗ್ಗೆ ಕೇಳಿ ಹಣಕ್ಕೆ ಬೇಡಿಕೆಯಿಟ್ಟಾಗ ನಾನು ತಲೆ ಕಡೆಸಿಕೊಳ್ಳಲ್ಲ ಎಂದಿದ್ದ ಆನಂದ್ ಗುರೂಜಿ ಮಾತು ಆಡಿಯೋದಲ್ಲಿದೆ. ಇದೀಗ FIR ದಾಖಲಾಗಿ ವಿಚಾರಣೆಗೆ ಬನ್ನಿ ಎನ್ನುತ್ತಿದ್ದಂತೆಯೇ ಬಂಧನ ಭೀತಿ ಹಿನ್ನೆಲೆಯಲ್ಲಿ ದಿವ್ಯಾ ವಸಂತ ಮತ್ತು ಕೃಷ್ಣಮೂರ್ತಿ ನಾಪತ್ತೆಯಾಗಿದ್ದಾರಂತೆ. ( video credit : PUBLIC IMPACT )