ನನ್ನ ಬೆನ್ನಿಗೆ ಚೂರಿ ಹಾಕ್ಬಿಟ್ರಲ್ರೀ ಎಂದು ಕಾವ್ಯಳಿಗೆ ಬೈದಾ ಗಿಲ್ಲಿ !! ಅಸಲಿ ಕಾರಣ ಇಲ್ಲಿದೆ ನೋಡಿ ?

ನನ್ನ ಬೆನ್ನಿಗೆ ಚೂರಿ ಹಾಕ್ಬಿಟ್ರಲ್ರೀ ಎಂದು ಕಾವ್ಯಳಿಗೆ ಬೈದಾ ಗಿಲ್ಲಿ !! ಅಸಲಿ ಕಾರಣ ಇಲ್ಲಿದೆ ನೋಡಿ ?

ಗಿಲ್ಲಿ ಮತ್ತು ಕಾವ್ಯ ನಡುವೆ ಮನಸ್ತಾಪ ಶುರುವಾಗಿದೆ. ಕಾವ್ಯ ಗಿಲ್ಲಿಗೋಸ್ಕರ ಕಣ್ಣೀರನ್ನೇ ಹಾಕಿದ್ದಾರೆ. ಗಿಲ್ಲಿ ಸ್ವತಃ ಕಾವ್ಯನ ಬಗ್ಗೆ ಇಲ್ಲಸಲ್ಲದೆ ಮಾತಾಡಿ ಅವಳಿಗೆ ನೋವು ತಂದಿದ್ದಾನೆ. ಇದರಿಂದ ಕಾವ್ಯ ಬೇಸರಗೊಂಡು ಅಳುವ ಪರಿಸ್ಥಿತಿ ಉಂಟಾಗಿದೆ.

ಅಶ್ವಿನಿ ಅಡುಗೆ ಮಾಡುತ್ತಿದ್ದಾಗ ಕಾವ್ಯ ಅಲ್ಲಿ ಬಂದಾಗ, ಗಿಲ್ಲಿ “ಬೆನ್ನಿಗೆ ಚೂರಿ ಹಾಕಿದಂತೆ” ಎಂದು ಹೇಳಿದ. ತನ್ನ ತಪ್ಪನ್ನು ಒಪ್ಪಿಕೊಂಡು, “ಜಂಟಿಯಾಗಿ ಒಪ್ಪಿಕೊಳ್ಳಬಾರದಿತ್ತು, ಅದೇ ನನ್ನ ದೊಡ್ಡ ತಪ್ಪು” ಎಂದು ಹೇಳಿದ. ಇದರಿಂದ ಕಾವ್ಯ ಇನ್ನಷ್ಟು ಬೇಸರಗೊಂಡರು. ಗಿಲ್ಲಿ ಕಾವ್ಯನಿಗೆ “ನೀನು ಈ ಮನೆಯಲ್ಲಿ ಏನು ಮಾಡ್ತಿಲ್ಲ, ನಿಂತುಕೊಂಡು ಅಲ್ಲಾಡ್ತೀಯಾ, ನನ್ನನ್ನ ನಾಮಿನೇಟ್ ಮಾಡ್ತೀಯಾ” ಎಂದು ಕಟುವಾಗಿ ಹೇಳಿದ.

ಕಾವ್ಯ ಇದಕ್ಕೆ ಪ್ರತಿಯಾಗಿ “ಇದನ್ನ ಮುಂಚೆ ಹೇಳಬೇಕಿತ್ತು, ಈಗ ಹೇಳ್ತಿದೀಯಾ” ಎಂದು ಉತ್ತರಿಸಿದರೂ, ಗಿಲ್ಲಿ “ನೀನು ನಿಜವಾದ ಫ್ರೀ ಪ್ರಾಡಕ್ಟ್” ಎಂದು ಹೇಳಿ ಅವಳಿಗೆ ಮತ್ತಷ್ಟು ನೋವು ತಂದ. ಇದರಿಂದ ಕಾವ್ಯ ಕಣ್ಣೀರಿನಿಂದ ತುಂಬಿ, ರಾಶಿಯ ಹತ್ತಿರ ಹೋಗಿ “ಅವನು ಮಾತಾಡ್ತಿರೋ ಒಂದೊಂದು ಮಾತನ್ನೂ ನಾನು ತಾಳಲಾರೆ” ಎಂದು ಹೇಳಿ ಅಳಲು ಆರಂಭಿಸಿದರು.

ಈ ಎಲ್ಲದಕ್ಕೂ ಮೂಲ ಕಾರಣ ಗಿಲ್ಲಿ. ಯಾಕೆಂದರೆ, ಈ ವಾರದ ಕ್ಯಾಪ್ಟನ್ ಆಗಲು ಅವನಿಗೆ ಸೀಕ್ರೆಟ್ ಟಾಸ್ಕ್ ಕೊಟ್ಟಿದ್ದರು. ಅಶ್ವಿನಿ ಗಿಲ್ಲಿಗೆ “ಕಾವ್ಯನ ಕಣ್ಣಲ್ಲಿ ನೀರು ತರಿಸಬೇಕು, ಅವಳು ಅಳಬೇಕು” ಎಂಬ ಟಾಸ್ಕ್ ನೀಡಿದ್ದರು. ಗಿಲ್ಲಿ ಅದನ್ನ ತುಂಬಾ ಸುಲಭವಾಗಿ ಸಾಧಿಸಿದ.

ಸೀಕ್ರೆಟ್ ರೂಮಿನಿಂದ ಬಂದ ನಂತರ ಗಿಲ್ಲಿಯ ವರ್ತನೆ ಬದಲಾಗಿದೆಯೆಂದು ಕೆಲವರು ಹೇಳಿದರೂ, ಅವನು ಕಾವ್ಯನ ಎಮೋಷನಲ್ ಕ್ಷಣಗಳನ್ನು ಹೊರಗೆಳೆದು ಅವಳನ್ನು ಅಳುವಂತೆ ಮಾಡಿದ. ಇದರಿಂದ ಗಿಲ್ಲಿ ಕ್ಯಾಪ್ಟನ್ ಆಗುವ ಸಾಧ್ಯತೆ ಹೆಚ್ಚಾಗಿದೆ.

ಗಿಲ್ಲಿ–ಕಾವ್ಯ ಎಷ್ಟೇ ಜಗಳ ಮಾಡಿದರೂ, ಅವರಿಬ್ಬರ ಬಾಂಡಿಂಗ್ ಮತ್ತೆ ಬಲವಾಗುತ್ತದೆ ಎಂಬ ಭರವಸೆ ಇದೆ. ಆದರೆ ಕಾವ್ಯ ತಮಾಷೆಗೆ ಈ ಮಾತುಗಳನ್ನು ಹೇಳಿದರೆ, ಮತ್ತೆ ಜಗಳ ಶುರುವಾಗಬಹುದು. ಆದರೂ ಗಿಲ್ಲಿ ತನ್ನ ಟಾಸ್ಕ್‌ನ್ನು ಅದ್ಭುತವಾಗಿ ಪೂರೈಸಿದನೆಂಬುದು ಸ್ಪಷ್ಟ.

???? ಇವರಿಬ್ಬರ ಬಾಂಡಿಂಗ್ ಬಗ್ಗೆ ಹಾಗೂ ಗಿಲ್ಲಿ ಕಾವ್ಯನನ್ನು ಅಳಿಸಿದ ಘಟನೆ ಬಗ್ಗೆ ನಿಮಗೆ ಸರಿಯೆಂದು ಅನಿಸುತ್ತದೆಯಾ ಅಥವಾ ತಪ್ಪೆಂದು ಅನಿಸುತ್ತದೆಯಾ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ