ರಾಜ್ಯದ ಎಲ್ಲಾ ರೈತರಿಗೆ 2 ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಘೋಷಣೆ! ಪೂರ್ತಿ ಮಾಹಿತಿ ಇಲ್ಲಿದೆ !!

ಕೇಂದ್ರ ಸರ್ಕಾರದಿಂದ ರಾಷ್ಟ್ರದ ರೈತರಿಗೆ ಬಹು ಮಹತ್ವದ ಖುಷಿ ಸುದ್ದಿಯೊಂದು ಈಗ ಪ್ರಕಟವಾಗಿದೆ. ಕಠಿಣ ಪರಿಸ್ಥಿತಿಗಳಲ್ಲಿ ಬೀಜ, ರಸಗೊಬ್ಬರ, ಕೀಟನಾಶಕ ಖರೀದಿಗೆ ಸಾಲ ತೆಗೆದುಕೊಂಡು ನಷ್ಟ ಅನುಭವಿಸುತ್ತಿರುವ ರೈತರಿಗೆ ನೆರವಾಗುವ ನಿಟ್ಟಿನಲ್ಲಿ, 2025ರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆಯ ಅಡಿಯಲ್ಲಿ ₹2 ಲಕ್ಷವರೆಗೆ ಕೃಷಿ ಸಾಲ ಮನ್ನಾ ಮಾಡುವ ಉದ್ದೇಶದಿಂದ ಹೊಸ ಪಟ್ಟಿ ಪ್ರಕಟಿಸಲಾಗಿದೆ. ಈ ಯೋಜನೆಯ ಲಾಭ ಪಡೆಯಲು ರೈತರು ಮಾನ್ಯತಾ ಪಡೆದ ಬ್ಯಾಂಕುಗಳಿಂದ KCC ಮೂಲಕ ಸಾಲ ಪಡೆದಿರುವುದು ಅತ್ಯವಶ್ಯಕ.
ಈ ಸಾಲಮನ್ನ ಯೋಜನೆಗೆ ಅರ್ಹತೆಯನ್ನು ಹೊಂದಿರುವ ರೈತರಿಗೆ 3% ರಿಂದ 7% ಬಡ್ಡಿದರದಲ್ಲಿ ನೀಡಲಾಗಿದ್ದ ಕೃಷಿ ಸಾಲವನ್ನು ಕೇಂದ್ರ ಸರ್ಕಾರ ಈಗ ಮನ್ನಾ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಈ ಯೋಜನೆಯ ಮೂಲಕ ರೈತರು ಬೀಜ, ಡೀಸೆಲ್, ನೀರಾವರಿ ಸೌಲಭ್ಯಗಳು ಮತ್ತು ಟಾರ್ಕ್ಟರ್ ಖರೀದಿಗೆ ಪಡೆದ ಸಾಲದಿಂದ ಮುಕ್ತರಾಗುತ್ತಾರೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದ ರೈತರು ಈಗಾಗಲೇ ಇದರ ಲಾಭ ಪಡೆದಿದ್ದಾರೆ ಮತ್ತು ಈಗ ಕರ್ನಾಟಕದ ರೈತರಿಗೂ ಈ ಅವಕಾಶ ಸಿಗಲಿದೆ ಎಂಬುದು ರಾಜ್ಯದ ಪ್ರಮುಖ ಬೆಳವಣಿಗೆ.
ಯಾರ ಹೆಸರು 2025ರ ಸಾಲಮನ್ನ ಪಟ್ಟಿಯಲ್ಲಿ ಒಳಗೊಂಡಿದೆಯೋ ಅವರು ಸಂಬಂಧಪಟ್ಟ ಬ್ಯಾಂಕಿನಲ್ಲಿ ಭೇಟಿ ನೀಡಿ ಹೆಚ್ಚಿನ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯ ಜೊತೆಗೆ ಭೂದಾಖಲೆ, ಸಾಲದ ವಿವರ ಮತ್ತು ಕುಟುಂಬದ ಸದಸ್ಯರ ಮಾಹಿತಿ ನೀಡುವುದು ಅಗತ್ಯ. ಸರ್ಕಾರಿ ಉದ್ಯೋಗದಲ್ಲಿರುವವರ ಕುಟುಂಬದ ಸದಸ್ಯರಿಗೆ ಈ ಯೋಜನೆಯ ಲಾಭವಿಲ್ಲ ಎಂಬ ನಿಯಮವಿದೆ.
ಹೆಚ್ಚಿನ ಮಾಹಿತಿ ಹಾಗೂ ಸಹಾಯಕ್ಕಾಗಿ ರೈತರು ತಮ್ಮ ಗ್ರಾಮ ಪಂಚಾಯತ್ ಕಚೇರಿ, ಬ್ಯಾಂಕ್ ಶಾಖೆ ಅಥವಾ ಸಿಎಸ್ಸಿ ಕೇಂದ್ರಗಳಿಗೆ ಸಂಪರ್ಕಿಸಬಹುದಾಗಿದೆ. ಕೇಂದ್ರ ಸರ್ಕಾರ ಈ ಕ್ರಮದ ಮೂಲಕ ರೈತರ ಆರ್ಥಿಕ ಒತ್ತಡ ಕಡಿಮೆ ಮಾಡಿ ಕೃಷಿ ಕ್ಷೇತ್ರವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದು, ಈ ಯೋಜನೆಯ ಲಾಭವನ್ನ ನೀವೂ ಸದುಪಯೋಗ ಪಡಿಸಿಕೊಳ್ಳಿ.