ಜುಲೈ 1ರಿಂದ ದೇಶಾದ್ಯಂತ 3 ಹೊಸ ನಿಯಮ ಜಾರಿಗೆ ಬಾರಿ ಬದಲಾವಣೆ !! ಕೇಂದ್ರ ಸರ್ಕಾರ ಆದೇಶ!!

ಜುಲೈ 1ರಿಂದ ದೇಶಾದ್ಯಂತ 3 ಹೊಸ ನಿಯಮ ಜಾರಿಗೆ ಬಾರಿ ಬದಲಾವಣೆ !! ಕೇಂದ್ರ ಸರ್ಕಾರ ಆದೇಶ!!

ಜುಲೈ 1, 2025ರಿಂದ ಭಾರತದಲ್ಲಿ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ. ಬ್ಯಾಂಕಿಂಗ್, ರೈಲ್ವೆ, ಆದಾಯ ತೆರಿಗೆ ಮತ್ತು ಜಿಎಸ್ಟಿ ಕ್ಷೇತ್ರಗಳಲ್ಲಿ ಈ ಬದಲಾವಣೆಗಳು ಜನಸಾಮಾನ್ಯರ ದಿನನಿತ್ಯದ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಮೆಟ್ರೋ ನಗರಗಳಲ್ಲಿ ತಿಂಗಳಿಗೆ ಕೇವಲ ಮೂರು ಉಚಿತ ಎಟಿಎಂ ವಹಿವಾಟುಗಳು ಮಾತ್ರ ಅನುಮತಿಸಲಾಗುತ್ತವೆ. ನಗರ ಪ್ರದೇಶಗಳಲ್ಲಿ ಈ ಮಿತಿ ಐದು ಬಾರಿ. ಈ ಮಿತಿಯನ್ನು ಮೀರಿ ವಹಿವಾಟು ಮಾಡಿದರೆ ₹23 ಶುಲ್ಕದ ಜೊತೆಗೆ ಜಿಎಸ್ಟಿ ಪಾವತಿಸಬೇಕಾಗುತ್ತದೆ.

ಹೆಚ್ಚುವರಿ ನಿಯಮಗಳಂತೆ, 10 ವರ್ಷ ಮೇಲ್ಪಟ್ಟ ಮಕ್ಕಳು ಸ್ವತಂತ್ರವಾಗಿ ಉಳಿತಾಯ ಖಾತೆ ತೆರೆಯಬಹುದಾಗಿದೆ. ಬ್ಯಾಂಕುಗಳು ಅವರಿಗೆ ಡೆಬಿಟ್ ಕಾರ್ಡ್, ಚೆಕ್ ಬುಕ್ ಮತ್ತು ನೆಟ್ ಬ್ಯಾಂಕಿಂಗ್ ಸೌಲಭ್ಯಗಳನ್ನು ನೀಡಲಿವೆ. ಆದರೆ 18 ವರ್ಷವಾದ ನಂತರ, ಅವರು ತಮ್ಮ ಖಾತೆಯನ್ನು ನವೀಕರಿಸಿ ಸಹಿ ನೀಡಬೇಕು. ಜೊತೆಗೆ, ಜೂನ್ 30 ಕೊನೆಯ ದಿನಾಂಕವಾಗಿದ್ದು, ಕೆವೈಸಿ ಅಪ್ಡೇಟ್ ಮಾಡದ ಖಾತೆಗಳನ್ನು ಜುಲೈ 1ರಿಂದ ನಿಷ್ಕ್ರಿಯಗೊಳಿಸಲಾಗುತ್ತದೆ.

ರೈಲ್ವೆ ಇಲಾಖೆಯು ಕೂಡ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ವೇಟಿಂಗ್ ಲಿಸ್ಟ್ ಟಿಕೆಟ್ ಹೊಂದಿರುವ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣ ಮಾಡಿದರೆ ₹400 ದಂಡ ವಿಧಿಸಲಾಗುತ್ತದೆ. ಜೊತೆಗೆ, ಹೆಚ್ಚಿನ ತೂಕದ ಲಗೇಜ್ ಸಾಗಾಟ ಮಾಡಿದರೆ ಟಿಕೆಟ್ ದರದ ಶೇಕಡಾ 6 ಪಟ್ಟು ದಂಡ ವಿಧಿಸಲಾಗುತ್ತದೆ. ಟಾಟ್ಕಾಲ್ ಟಿಕೆಟ್ ಬುಕ್ಕಿಂಗ್‌ಗಾಗಿ ಆಧಾರ್ ಆಧಾರಿತ ಓಟಿಪಿ ದೃಢೀಕರಣ ಕಡ್ಡಾಯವಾಗಿದ್ದು, ಜುಲೈ 15ರಿಂದ ಎಲ್ಲಾ ಬುಕ್ಕಿಂಗ್‌ಗಳಿಗೆ ಇದು ಅನಿವಾರ್ಯವಾಗಲಿದೆ.

ಜಿಎಸ್ಟಿ ಕ್ಷೇತ್ರದಲ್ಲೂ ಬದಲಾವಣೆಗಳಿದ್ದು, ಸರಿಯಾದ ದಾಖಲೆಗಳಿಲ್ಲದೆ ಅಥವಾ ತಪ್ಪು ಮಾಹಿತಿಯೊಂದಿಗೆ ಜಿಎಸ್ಟಿ ಫೈಲ್ ಮಾಡಿದರೆ ಭಾರೀ ದಂಡ ವಿಧಿಸಲಾಗುತ್ತದೆ. ಜುಲೈ 1ರಿಂದ ಜಾರಿಗೆ ಬರುವ ಈ ನಿಯಮಗಳು ವ್ಯಾಪಾರಸ್ಥರು, ಪ್ರಯಾಣಿಕರು ಮತ್ತು ಬ್ಯಾಂಕ್ ಗ್ರಾಹಕರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ, ಈ ಬದಲಾವಣೆಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.