ಅನೈತಿಕ ಸಂಬಂಧ ಎಷ್ಟು ಘೋರವಾಗಿರುತ್ತೆ!! ಇಲ್ಲಿದೆ ನೋಡಿ ಸತ್ಯ ಘಟನೆ

ಅನೈತಿಕ ಸಂಬಂಧ ಎಷ್ಟು ಘೋರವಾಗಿರುತ್ತೆ!! ಇಲ್ಲಿದೆ ನೋಡಿ ಸತ್ಯ ಘಟನೆ

ನಮ್ಮ ಈಗಿನ ಕಾಲದ ಸಮಾಜ ಎತ್ತ ಸಾಗುತ್ತಿದೆ . ಪ್ರೀತಿ ಪ್ರೇಮದ ಹೆಸರಿನಲ್ಲಿ ಅನೈತಿಕ ಸಂಬಂಧ ಎಲ್ಲ ಕಡೆ ಹೆಚ್ಚಾಗಿದೆ . ಅದರ ಪರಿಣಾಮ ಗೊತ್ತಿದ್ದರೂ ಅನೈತಿಕ ಸಂಬಂಧ ಬೆಳೆಸುವುದು ಹೆಚ್ಚಾಗಿದೆ. ಆದರೆ ಅದರ ಪರಿಣಾಮ ತುಂಬಾ ಘೋರವಾಗಿರುತ್ತೆ ಎಂದು ತಿಳಿದಿದ್ದರೂ ಅದನ್ನು ಮಾಡುತ್ತಾರೆ .ಇದಕ್ಕೆ ಪ್ರೇಮ ಅನ್ನಬೇಕೋ ಇಲ್ಲ ಕಾಮ ಅನ್ನಬೇಕೋ ಗೊತ್ತಾಗುತ್ತಿಲ್ಲ . ಇದರಿಂದ ಬೇರೆ ಮದುವೆ ಆಗಿರುವ ಎಲ್ಲ ಯುವಕ ಮತ್ತು ಯುವತಿಯರು ಪಾಠ ಕಲಿಯ ಬೇಕಾಗುತ್ತೆ .


ವಿವಾಹೇತರ ಸಂಬಂಧಗಳು ಒಳಗೊಂಡಿರುವ ಎಲ್ಲಾ ಪಕ್ಷಗಳಿಗೆ ಗಮನಾರ್ಹವಾದ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ, ಭಾವನಾತ್ಮಕ ಯೋಗಕ್ಷೇಮ, ಸಂಬಂಧಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಸಂಭಾವ್ಯವಾಗಿ ಸಾಮಾಜಿಕ ಮತ್ತು ಕಾನೂನು ಪರಿಣಾಮಗಳಿಗೆ ಕಾರಣವಾಗುತ್ತವೆ. ಅವು ಹೆಚ್ಚಾಗಿ ನಂಬಿಕೆಯ ಉಲ್ಲಂಘನೆಯನ್ನು ಒಳಗೊಂಡಿರುತ್ತವೆ, ಇದು ಎರಡೂ ಸಂಗಾತಿಗಳಿಗೆ ಭಾವನಾತ್ಮಕ ಆಘಾತಕ್ಕೆ ಕಾರಣವಾಗುತ್ತದೆ ಮತ್ತು ವಿಚ್ಛೇದನಕ್ಕೆ ಕಾರಣವಾಗಬಹುದು. ಒಳಗೊಂಡಿರುವ "ಮೂರನೇ ವ್ಯಕ್ತಿ" ಅಪರಾಧ, ಅಸೂಯೆ ಅಥವಾ ಬಳಸಲ್ಪಟ್ಟ ಭಾವನೆಗಳನ್ನು ಸಹ ಅನುಭವಿಸಬಹುದು. ಹೆಚ್ಚುವರಿಯಾಗಿ, ಸಂಬಂಧಗಳು ಒಳಗೊಂಡಿರುವ ಪಕ್ಷಗಳ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು, ಇದು ಭವಿಷ್ಯದ ಹೋರಾಟಗಳಿಗೆ ಕಾರಣವಾಗಬಹುದು.

ಇನ್‌ಸ್ಟಾಗ್ರಾಮ್​​ನಲ್ಲಿ ಪರಿಚಯವಾಗಿ ಹತ್ತೇ ದಿನಕ್ಕೆ ಕೊಲೆಯಾದ ವಿವಾಹಿತ ಮಹಿಳೆ: ಹತ್ಯೆಗೈದು ಚಿನ್ನಾಭರಣ ದೋಚಿದ ಯುವಕ
ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾದ ಯುವಕನೊಬ್ಬ ವಿವಾಹಿತ ಮಹಿಳೆಯನ್ನು ಕೊಲೆ ಮಾಡಿ ಶವವನ್ನು ತನ್ನ ಜಮೀನಿನಲ್ಲಿ ಬಚ್ಚಿಟ್ಟಿದ್ದ ಘಟನೆ ಮಂಡ್ಯದ ಕೆ.ಆರ್. ಪೇಟೆ ತಾಲ್ಲೂಕಿನ ಕರೋಟಿ ಗ್ರಾಮದಲ್ಲಿ ನಡೆದಿದೆ. ಕೊಲೆ ಬಳಿಕ ಮಹಿಳೆಯ ಮೇಲಿದ್ದ ಚಿನ್ನಾಭರಣವನ್ನು ದೋಚಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಪುನೀತ್ ಹಾಗೂ ವಿವಾಹಿತ ಮಹಿಳೆ ಪ್ರೀತಿ ಇಬ್ಬರು ಇನ್‌ಸ್ಟಾಗ್ರಾಮ್​​ನಲ್ಲಿ ಇತ್ತೀಚೆಗೆ ಪರಿಚಯವಾಗಿದ್ದಾರೆ. ಗಂಡ, ಮಕ್ಕಳಿದ್ದರೂ ಪ್ರೀತಿ, ಪುನೀತ್​ನನ್ನ ಲವ್​ ಮಾಡಿದ್ದಾರೆ. ಪರಿಚಯವಾಗಿ ಹತ್ತು ದಿನ ಪ್ರೀತಿ, ಪ್ರೇಮ ಎಂದು ಸುತ್ತಾಡಿದ್ದಾರೆ.
ಅದೇ ರೀತಿಯಾಗಿ ಕಳೆದ ಭಾನುವಾರ ಒಟ್ಟಿಗೆ ಕಾರಿನಲ್ಲಿ ಮೈಸೂರು, ಮಂಡ್ಯ ಪ್ರವಾಸಿ ಸ್ಥಳಗಳನ್ನು ಸುತ್ತಾಡಿ ಫುಲ್​ ಎಂಜಾಯ್‌ ಮಾಡಿದ್ದಾರೆ. ಪ್ರಿಯತಮೆ ಫೋನ್​​ಗೆ ಬಂದ ಕಾಲ್​ನಿಂದಲೇ ಐನಾತಿ ಸಿಕ್ಕಿಬಿದಿದ್ದಾನೆ. ಬಳಿಕ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ಆಗಿದೆ. ಅಲ್ಲೇ ಪ್ರೀತಿಯನ್ನ ಕೊಲೆ ಮಾಡಿದ ಪುನೀತ್​, ಮೈಮೆಲಿದ್ದ ಚಿನ್ನಾಭರಣ ದೋಚಿದ್ದಾನೆ. ಬಳಿಕ ಕರೋಟಿ ಗ್ರಾಮದ ತನ್ನ ಜಮೀನಿನಲ್ಲಿ ಶವ ಬಿಚ್ಚಿಟ್ಟಿದ್ದಾನೆ.