ಚೈತ್ರಾ ವಾಸುದೇವನ್ ಸಂಸಾರದಲ್ಲಿ ಬಿರುಕು..! ಗಂಡನ ಬಗ್ಗೆ ಹೇಳಿದ್ದೆ ಬೇರೆ !!

ಚೈತ್ರಾ ವಾಸುದೇವನ್ ಸಂಸಾರದಲ್ಲಿ ಬಿರುಕು..! ಗಂಡನ ಬಗ್ಗೆ ಹೇಳಿದ್ದೆ ಬೇರೆ !!

ನಮ್ಮ ಕನ್ನಡದ ನಿರೂಪಕಿಯರಲ್ಲಿ ಸಾಕಷ್ಟು ಜನರು ಈಗಾಗಲೇ ಬಂದು ಹೋಗಿದ್ದಾರೆ..ಇನ್ನು ಕೆಲವರು ಇಂದಿಗೂ ಕೂಡ ತಮ್ಮದೇ ಆದ ವಿಭಿನ್ನ ಮಾತಿನ ಮೂಲಕ, ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಜನಮನ ಗೆದ್ದು ನಿರೂಪಣೆಯಲ್ಲಿ ಹಾಗೆ ಸಾಗುತ್ತಲೆ ಇದ್ದಾರೆ.. ಅಂತವರಲ್ಲಿ ಚೈತ್ರ ವಾಸುದೇವನ್ ಕೂಡ ಒಬ್ಬರು.. ಹೌದು ಈ ಹೆಸರನ್ನು ನೀವು ಈಗಾಗಲೇ ಕೇಳಿರುತ್ತೀರಿ. ಚೈತ್ರ ವಾಸುದೇವನ್ ಬಿಗ್ ಬಾಸ್ ಗೆ ಬಂದಿದ್ದರು.

ಬಿಗ್ಬಾಸ್ ಸೀಸನ್ ಏಳರಲ್ಲಿ ಚೈತ್ರ ವಾಸುದೇವನ್ ಅವರು ಕಾಣಿಸಿಕೊಂಡಿದ್ದು ಮೊದಲ ವಾರದಲ್ಲಿಯೆ ಇವರು ಹೊರ ಬೀಳಬೇಕಾಯಿತು. ಚೈತ್ರ ವಾಸುದೇವನ್ ಅವರು ಬಿಗ್ ಬಾಸ್ ಬರುವ ಮುನ್ನವೂ ಕೂಡ ಸುಮಾರು 10 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರೂಪಣೆ ಮಾಡುತ್ತಾ ತಮ್ಮದೇ ಆದ ಯೂಟ್ಯೂಬ್ ಖಾತೆಯ ಮೂಲಕ ವಿಭಿನ್ನ ಕಂಟೆಂಟ್ ಗಳನ್ನು ಹಾಕಿಕೊಂಡು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಚೈತ್ರ ವಾಸುದೇವನ್ ಅವರು ಕೇವಲ ನಿರೂಪಣೆ ಮಾಡುತ್ತಾ ಹೆಸರು ಮಾಡಿದವರು ಅಲ್ಲ, ಬದಲಿಗೆ ಇವೆಂಟ್ ಕಾರ್ಯಕ್ರಮಗಳನ್ನು ಕೂಡ ನಡೆಸುತ್ತಿದ್ದರು.   

ತಮ್ಮದೇ ಒಂದು ಇವೆಂಟ್ ಕಂಪನಿಗೆ ಎಂಡಿ ಆಗಿ ಕೆಲಸ ಮಾಡುತ್ತಿದ್ದ ನಿರೂಪಕಿ. ಇವರು ಹೆಚ್ಚಾಗಿ ಯಾವ ಅವರ ಕೌಟುಂಬಿಕ ವಿಚಾರಗಳನ್ನು ಅಥವಾ ಅವರ ವೈಯಕ್ತಿಕ ವಿಚಾರಗಳನ್ನು ಹಚ್ಚಿಕೊಂಡಿರಲಿಲ್ಲ. ಬದಲಿಗೆ ಹೆಚ್ಚು ಸೈಲೆಂಟ್ ಎಂದು ಹೇಳಬಹುದು. ಒಮ್ಮೆ ಕಿರುತೆರೆಯ ಮೇಲೆ ಬಂದರೆ ಸಕತ್ ನಿರೂಪಣೆ ಮಾಡುತ್ತಾ ಚಟಪಟ ಮಾತನಾಡುವ ಕೌಶಲ್ಯ ಹೊಂದಿರುವ ನಿರೂಪಕಿ ಚೈತ್ರ ವಾಸುದೇವನ್ ಅವರ ದಾಂಪತ್ಯ ಜೀವನದಲ್ಲಿ ಇದೀಗ ಬಿರುಕು ಮೂಡಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಹೌದು ಈ ವಿಚಾರವಾಗಿ ಆರು ತಿಂಗಳ ಹಿಂದೆಯೇ ಒಂದು ಸುದ್ದಿ ಆಗಿತ್ತು. ಆದರೆ ಇದು ಬಹಿರಂಗವಾಗಿ ಎಲ್ಲಿಯೂ ಕೇಳಿ ಬಂದಿರಲಿಲ್ಲ. ಚೈತ್ರ ವಾಸುದೇವನ್ ಅವರು ಇವೆಂಟ್ ನ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಇವೆಂಟ್ ಮ್ಯಾನೇಜ್ಮೆಂಟ್ ಸತ್ಯ ನಾಯ್ಡು ಎನ್ನುವವರ ಒಟ್ಟಿಗೆ 2017ರಲ್ಲಿ ಮದುವೆಯಾಗಿದ್ದರು.

ಸತ್ಯ ನಾಯ್ಡು ಅವರು ಒಬ್ಬ ಉದ್ಯಮಿ, ಇವರಿಬ್ಬರ ಸ್ನೇಹ ಇವೆಂಟ್ ಮೂಲಕವೇ ಹುಟ್ಟಿಕೊಂಡಿದ್ದು, ನಂತರ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು, ನಂತರ ಇಬ್ಬರೂ ಮನೆಯವರ ಒಪ್ಪಿಗೆ ಪಡೆದು ಮದುವೆ ಸಹ ಆಗಿದ್ದರು. ಆದರೆ ಈಗ ಬೇರೆ ಬೇರೆ ಆಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಉತ್ತರವೆಂಬಂತೆ ನಿರೂಪಕಿ ಚೈತ್ರ ವಾಸುದೇವನ್ ಅವರೇ ಏನು ಹೇಳಿದ್ದಾರೆ ನೀವೇ ಓದಿ. 'ತುಂಬಾ ದಿನಗಳ ಕಾಲ ನಾನು ಇದರ ಬಗ್ಗೆ ಚಿಂತಿಸಿ ಈಗ ಧೈರ್ಯವಾಗಿ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಸತ್ಯ ಮತ್ತು ನಾನು ಬೇರೆ ಬೇರೆ ಆಗಿದ್ದೇವೆ. ಈ ವಿಚಾರಕ್ಕಾಗಿ ನನ್ನನ್ನು ಯಾರು ನಿಂದಿಸಬೇಡಿ, ಟೀಕಿಸಬೇಡಿ ಮತ್ತು ದ್ವೇ’ಷ ಮಾಡಬೇಡಿ ಜೀವನದಲ್ಲಿ ಕೆಲಸ ಮಾತ್ರ ನಮಗೆ ನೆಮ್ಮದಿ ಕೊಡುತ್ತದೆ ಎನ್ನುವುದನ್ನು ನಾನು ನಂಬುತ್ತೇನೆ. ಇಷ್ಟು ದಿನಗಳವರೆಗೆ ನಿಮ್ಮನ್ನು ನಿರೂಪಕಿಯಾಗಿ ರಂಜಿಸುವ ಅವಕಾಶ ಸಿಕ್ಕಿತ್ತು ಇನ್ನು ಮುಂದೆ ಕೂಡ ನಾನು ಅದೇ ಹಾದಿಯಾಗಿ ಸಾಗಲು ನಿರ್ಧರಿಸಿದ್ದೇನೆ'' ಎಂದು ಚೈತ್ರಾ ಅವರು ಈ ವಿಚಾರ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ...