ಈ ವಿಷ್ಣು ದೇವಸ್ಥಾನದಲ್ಲಿ ಮಾತ್ರ ಶಟಗೋಪ ಅಥವಾ ಶಟಾರಿಯನ್ನು ಬಳಸುತ್ತಾರೆ ಯಾಕೆ ಗೊತ್ತಾ?

ಈ ವಿಷ್ಣು ದೇವಸ್ಥಾನದಲ್ಲಿ ಮಾತ್ರ ಶಟಗೋಪ ಅಥವಾ ಶಟಾರಿಯನ್ನು ಬಳಸುತ್ತಾರೆ ಯಾಕೆ ಗೊತ್ತಾ?

ಹಿಂದೂ ದೇವಾಲಯಗಳ  ಧಾರ್ಮಿಕ ಸಮಾಜದಲ್ಲಿ ಅತ್ಯಂತ ಪ್ರಮುಖವಾದ ಸ್ಥಾನವನ್ನು ಹಿಡಿಯುತ್ತದೆ.  ಇದು ಧಾರ್ಮಿಕ ಸಂಸ್ಕೃತಿಯ ರಕ್ಷಣೆ ಮತ್ತು ಪ್ರಚಾರಕ್ಕೆ ಮುಖ್ಯವಾದ ಅಂಗವಾಗಿದೆ. ಈ ದೇವಾಲಯಗಳ ಆಧ್ಯಾತ್ಮಿಕ ಮೂಲಕ ಸಾಮಾಜಿಕ ಸಹಾಯ ಮತ್ತು ಶಿಕ್ಷಣದ ಕೆಲಸವನ್ನು ನಡೆಸುತ್ತದೆ.ಹಿಂದೂ ದೇವಾಲಯಗಳ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಈ ಮೂಲಕ ಧರ್ಮಗಳ ಅನುಯಾಯಿಗಳಿಗೆ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸಹಾಯ ನೀಡಲಾಗುತ್ತದೆ. ಇನ್ನೂ ದೇವಾಲಯಕ್ಕೆ ಹೋಗುವ ಉದ್ದೇಶವು ವ್ಯಕ್ತಿಯ ವಿಶೇಷ ಆಧ್ಯಾತ್ಮಿಕ ಅನುಭವಗಳನ್ನು ಹೊಂದಲು, ಧಾರ್ಮಿಕ ಆಚರಣೆಗಳನ್ನು ನಡೆಸಲು, ಶಾಂತಿಯನ್ನು ಹುಟ್ಟಿಸಲು, ಅಥವಾ ಆಧ್ಯಾತ್ಮಿಕ ತಳಮಳವನ್ನು ಸಹನೆಮಾಡಲು ಇರಬಹುದು. ಇದು ವ್ಯಕ್ತಿಯ ಧಾರ್ಮಿಕ ಆವಶ್ಯಕತೆಗಳನ್ನು ಪೂರೈಸಲು ಮತ್ತು ಆಧ್ಯಾತ್ಮಿಕ ಸಮೃದ್ಧಿಯನ್ನು ಹೊಂದಲು ನಡೆಸಲ್ಪಡುತ್ತದೆ ಎಂದು ಹೇಳಬಹುದು.

ಇನ್ನೂ ನಮ್ಮಲ್ಲಿ ಸಾಕಷ್ಟು ವಿಭಿನ್ನ ದೇವಾಲಯಗಳು ಕೊಡ ಇದ್ದು ಈ ದೇವಾಲಯಗಳಲ್ಲಿ ಕೊಡ ನಾನಾ ರೀತಿಯ ಆಚರಣೆಗಳನ್ನು ನಾವು ಕಾಣಬಹುದು. ಇನ್ನೂ ನಾವೆಲ್ಲರೂ ಗಮನಿಸಿರುವ ಪ್ರಕಾರ ಕೇವಲ ವಿಷ್ಣು ಅವತಾರದ ದೇವಾಲಯಗಳಲ್ಲಿ ಮಾತ್ರ ಈ ಶಟಗೋಪ ಅಥವಾ ಶತಾರಿಯನ್ನು ಬಳಸುತ್ತಾರೆ. ಇದನ್ನು ಯಾರಾದರೂ ಗಮನಿಸಲಿರಲಿಕ್ಕೆ ಬೇಕು. ಆದ್ರೆ ಈ ಶಟಗೋಪ ಅಥವಾ ಶಟಾರಿ ಎಂದರೇನು ಹಾಗೂ ಈ ವಿಷ್ಣು ಅವತಾರ ಇರುವ ದೇವಾಲಯಗಳಲ್ಲಿ ಮಾತ್ರ ಯಾಕೆ ಬಳಸುತ್ತಾರೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ. ಈ ಶಟಗೋಪ ಅಥವಾ ಶಟಾರಿ ಎಂದ್ರೆ ಈ ಕಿರೀಟ ರೀತಿಯಲ್ಲಿ ಇರುವ ವಸ್ತು ಎಂದು ಹೇಳಬಹುದು. ಇದನ್ನು ಪೂಜೆ ಮಾಡಿದ ನಂತರ ನಿಮಗೆ ತೀರ್ಥ ಹಾಗೂ ಪ್ರಸಾದ ನೀಡುವ ಸಮಯದಲ್ಲಿ ನಿಮ್ಮ ತಲೆಯ ಮೇಲೆ ಇಟ್ಟು ಆಶೀರ್ವಾದ ಮಾಡುತ್ತಾರೆ.  

ಏಕೆಂದ್ರೆ ಭಕ್ತರು ದೇವಸ್ಥಾನಕ್ಕೆ ಹೋಗುವುದು ಮನಸ್ಸಿನ ನೆಮ್ಮದಿ ಹಾಗೂ ಖುಷಿಯನ್ನು ಬಯಸಿ ಎಂದು ಹೇಳಬಹುದು. ಹೊದಾಗೆಲ್ಲ ಭಕ್ತಿಯಿಂದ ದೇವ್ರ ಪಾದವನ್ನು ಮುಟ್ಟಿ ನಮಸ್ಕಾರ ಮಾಡಬೇಕು ಎಂಬ ಆಸೆ ಎಲ್ಲರಲ್ಲೂ ಇರುತ್ತೆ ಎಂದರೆ ತಪ್ಪಾಗಲಾರದು. ಆದರೆ ವಿಷ್ಣು ದೇವಸ್ಥಾನದಲ್ಲಿ ಮಾತ್ರ ಬಳಸುತ್ತಾರೆ. ಇದರಲ್ಲಿ ವಿಷ್ಣುವಿನ ಪಾದ ಅದವಳಿಕೆ ಮಾಡಲಾಗಿರುತ್ತದೆ ಇದನ್ನು ಭಕ್ತರ ತಲೆಯ ಮೇಲೆ ಇಟ್ಟು ಆಶಿರ್ವಾದ  ಮಾಡಿದಾಗ ದೇವ್ರ ಕಾಲಿನ ಮುಟ್ಟು ಆಶೀರ್ವಾದ ಪಡೆದಂತೆ ಎಂಬ ನಂಬಿಕೆ ಇದೆ. ಹಾಗೆಯೇ ಇದಕ್ಕೂ ಕೊಡ ದೇವ್ರಿಗೆ ಅಭಿಷೇಕ,ಪೂಜೆ ಮಾಡುವ ಸಮಯದಲ್ಲಿ ಪೂಜೆ ಮಾಡಲಾಗುವುದು.  ( video credit : Parichaya )