ಅಹಮದಾಬಾದ್ ವಿಮಾನ ಉಡಾಯಿಸಿದ್ದು ನಾವೇ!! ನಿಮಗೆ ತಾಕತ್ತಿದ್ರೆ ನಮ್ಮನ್ನು ಹಿಡಿಯಲಿ!

ಅಹಮದಾಬಾದಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಕಡೆಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171, ಜೂನ್ 12ರಂದು ಪತನಗೊಂಡು 270ಕ್ಕೂ ಹೆಚ್ಚು ಜನರು ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡರು. ಈ ದುರ್ಘಟನೆ ಭಾರತದ ಇತಿಹಾಸದಲ್ಲೇ ಭೀಕರವಾದ ವಿಮಾನ ಅಪಘಾತಗಳಲ್ಲಿ ಒಂದಾಗಿ ದಾಖಲಾಗಿದೆ. ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಹಮದಾಬಾದಿನ BJ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಟ್ಟಡದ ಮೇಲೆ ಪತನಗೊಂಡು ಭಾರೀ ಸ್ಫೋಟ ಸಂಭವಿಸಿತು. ಘಟನೆಯ ತೀವ್ರತೆಗೆ ಕಾರಣವಾಗಿ, ಹಲವಾರು ದೇಹಗಳು ಗುರುತಿಸಲಾಗದ ಸ್ಥಿತಿಯಲ್ಲಿ ಸಿಕ್ಕಿದ್ದು, ಡಿಎನ್ಎ ಪರೀಕ್ಷೆ ಮೂಲಕ ಗುರುತಿಸುವ ಕಾರ್ಯ ನಡೆಯುತ್ತಿದೆ.
ಈ ಮಧ್ಯೆ, ಚೆನ್ನೈ ಮೂಲದ ಟೆಕ್ಕಿ ಮಹಿಳೆ ರೆನೆ ಜೋಶಿಲ್ಡ ಈ ಅಪಘಾತಕ್ಕೆ ಸಂಬಂಧಿಸಿದಂತೆ ಇಮೇಲ್ ಮೂಲಕ ಹೊಣೆ ಹೊತ್ತಿರುವುದಾಗಿ ಹೇಳಿಕೆ ನೀಡಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ರೆನೆ, ಡೆಲಾಯಿಟ್ ಕಂಪನಿಯಲ್ಲಿ ಹಿರಿಯ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದ robotics ಎಂಜಿನಿಯರ್ ಆಗಿದ್ದು, ದೇಶದಾದ್ಯಂತ 11ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಾಂಬ್ ಬೆದರಿಕೆಗಳ ಇಮೇಲ್ ಕಳಿಸಿದ್ದಾಳೆ. ಈ ಇಮೇಲ್ಗಳಲ್ಲಿ, ನರೇಂದ್ರ ಮೋದಿ ಕ್ರೀಡಾಂಗಣ, BJ ಮೆಡಿಕಲ್ ಕಾಲೇಜು, ಶಾಲೆಗಳು ಸೇರಿದಂತೆ ಹಲವಾರು ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿದ್ದಾಳೆ.
ಪೊಲೀಸರ ತನಿಖೆಯ ಪ್ರಕಾರ, ಈ ಇಮೇಲ್ಗಳು ನಕಲಿ ಇಮೇಲ್ ಐಡಿಗಳ ಮೂಲಕ ಕಳಿಸಲಾಗಿದ್ದು, ಅವುಗಳಲ್ಲಿ ಕೆಲವನ್ನು ರೆನೆ ತನ್ನ ಮಾಜಿ ಸಹೋದ್ಯೋಗಿ ದಿವೀಚ್ ಪ್ರಭಾಕರ್ ಅವರ ಹೆಸರಿನಲ್ಲಿ ಸೃಷ್ಟಿಸಿದ್ದಾಳೆ. ಪ್ರೀತಿಯಲ್ಲಿ ನಿರಾಕೃತಳಾದ ರೆನೆ, ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಈ ತಂತ್ರಜ್ಞಾನವನ್ನು . . ಡಾರ್ಕ್ ವೆಬ್, VPN, ಟೋರ್ ಬ್ರೌಸರ್ ಮುಂತಾದ ತಂತ್ರಜ್ಞಾನಗಳನ್ನು ಬಳಸಿಕೊಂಡು ತನ್ನ ಗುರುತು ಮರೆಮಾಚಲು ಯತ್ನಿಸಿದ್ದರೂ, ಒಂದು ಸಣ್ಣ ತೊಂದರೆಯಿಂದ ಪೊಲೀಸರು ಆಕೆಯ ಐಪಿ ಅಡ್ರೆಸ್ ಪತ್ತೆಹಚ್ಚಿ ಬಂಧಿಸಿದ್ದಾರೆ.
ಪ್ರಸ್ತುತ, ರೆನೆ ಜೋಶಿಲ್ಡನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಈ ಪ್ರಕರಣವು ದೇಶದ ಇತಿಹಾಸದಲ್ಲೇ ಅತ್ಯಂತ ಸಂಕೀರ್ಣ ಸೈಬರ್ ಅಪರಾಧ ಪ್ರಕರಣಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಈ ಪ್ರಕರಣವು ತಂತ್ರಜ್ಞಾನ ದುರುಪಯೋಗ, ವೈಯಕ್ತಿಕ ಪ್ರತೀಕಾರ ಮತ್ತು ಸಾರ್ವಜನಿಕ ಭದ್ರತೆಗೆ ಸಂಬಂಧಿಸಿದಂತೆ ಗಂಭೀರ ಚರ್ಚೆಗೆ ಕಾರಣವಾಗಿದೆ. ತನಿಖೆ ಮುಂದುವರಿದಿರುವಾಗ, ವಿಮಾನ ಅಪಘಾತದ ನಿಖರ ಕಾರಣ ತಿಳಿಯಲು ಬ್ಲ್ಯಾಕ್ ಬಾಕ್ಸ್ ಡಿಕೋಡಿಂಗ್ ಮತ್ತು ತಾಂತ್ರಿಕ ವಿಶ್ಲೇಷಣೆ ನಿರೀಕ್ಷೆಯಲ್ಲಿದೆ.