ಹಲ್ಲೆಗೆ ಒಳಗಾದ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಪ್ಪ! ಪೊಲೀಸರು ಕೊಡ ಸಹಾಯಕ್ಕೆ ಬರಲಿಲ್ಲ ಯಾಕೆ ಗೊತ್ತಾ?

ಹಲ್ಲೆಗೆ ಒಳಗಾದ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಪ್ಪ! ಪೊಲೀಸರು ಕೊಡ ಸಹಾಯಕ್ಕೆ ಬರಲಿಲ್ಲ ಯಾಕೆ ಗೊತ್ತಾ?

ಇನ್ನೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸ್ಟಾರ್ ಕಪಲ್ ಇದ್ದಾರೆ ಅವರಲ್ಲಿ ಕೆಲವ್ರು ಸಿನಿಮಾ ಪ್ರಪಂಚದಲ್ಲಿ ಗುರುತಿಸಿಕೊಂಡು ಪ್ರೀತಿಸಿ ಮದುವೆಯಾಗಿದ್ದರು ಕೊಡ ಇದ್ದಾರೆ. ಇದೀಗ ಕಳೆದ ವರ್ಷದಲ್ಲಿ ಈ ಪಟ್ಟಿಗೆ ಸೇರ್ಪಡೆ ಆದ ಜೋಡಿ ಎಂದ್ರೆ ಅದು ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಪ್ಪ . ಕಳೆದ ವರ್ಷ ದಾಂಪತ್ಯದ ಜೀವನಕ್ಕೆ ಕಾಲಿಟ್ಟ ಇವರು ತಮ್ಮ ದೀರ್ಘ ಕಾಲದ ಪ್ರೀತಿಯನ್ನು ಕೊಡ ದಾಂಪತ್ಯದ ಜೀವನದ ದಿಕ್ಕಿಗೆ ಬದಲಿಸಿಕೊಂಡರು. ಇನ್ನೂ ಇಬ್ಬರು ಕೊಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು ಸಿನಿಮಾ ಮೂಲಕ ಪರಿಚಯ ಆದ ಇವರು ಇದರಿಂದ ಸ್ನೇಹ ಆ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು ಎಂದು ಸಾಕಷ್ಟು ಇಂಟರ್ವ್ಯೂ ನಲ್ಲಿ ಹೇಳಿದ್ದಾರೆ.

ಇನ್ನೂ ಇಬ್ಬರು ಸಿನಿಮಾ ಜೊತೆಗೆ ಕರೂನ ಸಮಯದಲ್ಲಿ ಸಾಕಷ್ಟು ಮಂದಿಗೆ ಊಟ ಹಾಗೂ ಬಟ್ಟೆಯ ಸಹಾಯ ಕೊಡ ಈ ಜೋಡಿ ಮಾಡಿದ್ದು ನಾವು ನೋಡಿದ್ದೇವೆ. ಇದರಿಂದ ಆದರ್ಶ ಜೋಡಿಗಳಾಗಿ ಕೊಡ  ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದೀಗ ಮತ್ತೆ ಈ ಜೋಡಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಲ್ಲಿ ಇದ್ದಾರೆ. ಕಾರಣ ಏನೆಂದರೆ ಬೆಂಗಳೂರಿನಲ್ಲಿ ಊಟಕ್ಕೆಂದು ಈ ಜೋಡಿ ಮನೆಯಿಂದ ಹೊರಗೆ ಹೂಗಿದ್ದಾಗ ರೆಸ್ಟೋರೆಂಟ್ ಬಳಿಯಲ್ಲಿ ಇವರಿಗೆ ಪರ ಭಾಷೆಯ ಮಂದಿಗಳಿಂದ ಹರಾಸ್ ಆಗಿರುವ ಪ್ರಕರಣ ನಡೆದಿದೆ. ಇನ್ನೂ ಈ ವಿಷಯವನ್ನು ಸ್ವತಃ ತಾವೇ ಪೊಲೀಸರಿಗೆ ದೂರು ದಾಖಲು ಮಾಡಿ ಆ ನಂತರ ತನಗೆ ಆದ ಅನುಭವವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮುಖಾಂತರ ತಿಳಿಸಿದ್ದಾರೆ.   

ಈ ಲೋಕಲ್ ಕನ್ನಡಿಗರಿಗೆ ಪಾಠ ಕಲಿಸಬೇಕು ಎಂದು ಹೇಳಿ ನನ್ನ ಪತಿಯ ಮುಖದ ಮೇಲೆ ಹೊಡೆಯಲು ಸಹ ಪ್ರಯತ್ನಿಸಿದರು. ನನ್ನ ಪತಿ ತುಂಬಾ ತಾಳ್ಮೆಯಿಂದಿದ್ದರು ಮತ್ತು ಹೆಚ್ಚು ಪ್ರತಿಕ್ರಿಯಿಸಲಿಲ್ಲ. ನನಗೆ ಆಶ್ಚರ್ಯವಾಯಿತು. ಏಕೆಂದರೆ ಅವರು ಸಾಮಾನ್ಯವಾಗಿ ತುಂಬಾ ಸಿಟ್ಟು ಸ್ವಭಾವದವರು. 2 - 3 ನಿಮಿಷಗಳಲ್ಲಿ ಅದೇ ಗ್ಯಾಂಗ್‌ನ 20 - 30 ಸದಸ್ಯರ ಗುಂಪು ಜಮಾಯಿಸಿತು. ಅವರಲ್ಲಿ ಇಬ್ಬರು ನನ್ನ ಗಂಡನ ಚಿನ್ನದ ಸರವನ್ನು ಕಿತ್ತುಕೊಂಡು, ನಂತರ ಅವರು ಅದನ್ನು ಬಹಳ ಕೌಶಲ್ಯದಿಂದ ತಮ್ಮ ಕಡೆಗೆ ಎಳೆಯಲು ಪ್ರಯತ್ನಿಸಿದರು. ನನ್ನ ಪತಿ ಇದನ್ನು ಸಮಯಕ್ಕೆ ಸರಿಯಾಗಿ ಅರಿತುಕೊಂಡರು. ಅದನ್ನು ಹಿಡಿದಿಟ್ಟುಕೊಂಡು ನನಗೆ ಕೊಟ್ಟರು. ಅಷ್ಟೊತ್ತಿಗಾಗಲೇ ಇಡೀ ತಂಡವು ಚಿನ್ನದ ಸರ ಮತ್ತು ಇತರ ಬೆಲೆಬಾಳುವ ವಸ್ತುಗಳು ಕೈಗೆ ಸಿಗದೆ ಇರುವುದರಿಂದ ರೊಚ್ಚಿಗೆದ್ದು ವಾಹನಕ್ಕೆ ಹಾನಿ ಮಾಡಿ ನಮಗೆ ಅಥವಾ ಯಾರಿಗೂ ಅರ್ಥವಾಗದ ವಿಷಯಗಳನ್ನು ಹೇಳಿ ನಮ್ಮನ್ನು ದೈಹಿಕವಾಗಿ ನಿಂದಿಸಲು ಪ್ರಯತ್ನಿಸಿದರು.
 

ನಿಮಗೇಲ್ಲಾರಿಗೂ ಕೊಡ ಬೆಂಗಳೂರು ನಗರ ಸೇಫ್   ಇಲ್ಲ ಎಂಬ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ. ಇದೀಗ ಪ್ರೆಜರ್ ಟೌನ್ ನಲ್ಲಿ ಇರುವ ಕರಾಮ ಎಂಬ ರೆಸ್ಟೋರೆಂಟ್ ನಲ್ಲಿ ಸಂಜೆಯಲ್ಲಿ ಕುಟುಂಬದವರ ಜೊತೆಗೆ ಊಟಕ್ಕೆ ತೆರಳಿದ್ದು ಊಟ ಮುಗಿಸಿ ಹೊರಟ ನಂತರ ಕಾರ್ ತೆಗೆದುಕೊಂಡು ಹೊರಡುವ ವೇಳೆಯಲ್ಲಿ ಇಬ್ಬರು ವ್ಯಕ್ತಿಗಳು ಬಂದು ನಿಮ್ಮ ವಾಹನ ದೊಡ್ಡದಾಗಿದೆ ನಮಗೆ ಗುದ್ದಿದ್ದಾರೆ ಎಂದೆಲ್ಲ ಸುಮ್ಮನೆ ಜಗಳ ಆಡಲು ಬಂದದ್ದು ಉಂಟು. ಚಿನ್ನದ ಸರ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಕೇಳಿದ್ದು ಅಲ್ಲದೆ ಕಾರಿಗೆ ಹಾನಿ ಮಾಡಿದ್ದು ಉಂಟು ಈ ವಿಚಾರವನ್ನು ಪೊಲೀಸರಿಗೆ ಲಿಖಿತ ರೂಪದಲ್ಲಿ ಬರೆದು ಕಂಪ್ಲೇಂಟ್ ಕೊಟ್ಟಿದ್ದು ಅಲ್ಲದೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.